ಹೊಸದಿಗಂತ ವರದಿ, ಕಲಬುರಗಿ:
ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣ ಸಮೀಪದ ಡ್ರೈವರ್ ದಾಬಾ ಹತ್ತಿರ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನ ಆರೋಪಿತರನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿತರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಕಲಬುರಗಿ ನಗರ ಪೋಲಿಸ್ ಆಯುಕ್ತಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಲಬುರಗಿ ನಗರ ಪೋಲಿಸ್ ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಗಳಾದ ನಾಗರಾಜ್ ಶಿವಪುತ್ರ ತಾಳಿಕೋಟಿ (೨೩),ಈರಣ್ಣಾ ಶಿವಪುತ್ರ ತಾಳಿಕೋಟಿ (೨೭),ಬೀರಣ್ಣ ಲಕ್ಷ್ಮಣ ಪೂಜಾರಿ (೨೧), ಸಿದ್ಧಾರೂಢ ಕಲ್ಯಾಣ ಹತಗುಂದಿ(೨೨), ನಾಗರಾಜ್ ಶಶಿಧರ್ ಬಿಸಗೋಂಡ (೧೭),ಪೀರೇಶ್ ಅಂಬಾರಾಯ ಹಡಪದ (೩೫),ಸಾಗರ ಲಕ್ಷ್ಮಿಕಾಂತ್ ಪಾಟೀಲ್ (೨೪),ರಾಚಣ್ಣಾ ಬಸವರಾಜ ಮಾಲಿಪಾಟೀಲ (೨೨), ಚಂದ್ರಕಾಂತ ಶಾಂತಪ್ಪ ಪೂಜಾರಿ (೩೦) ಹಾಗೂ ಭಾಗ್ಯಶ್ರೀ ಸೋಮನಾಥ್ ತಾಳಿಕೋಟಿ (೩೦) ಆರೋಪಿತರ ಬಂಧನವನ್ನು ಪ್ರಕರಣದ ೨೪ ಗಂಟೆಯೊಳಗೆ ಬಂಧಿಸಲಾಗಿದೆ ಎಂದು ನಗರ ಪೋಲಿಸ್ ಆಯುಕ್ತಾಲಯ ಕಚೇರಿ ತಿಳಿಸಿದೆ.