ʼಕಾಂತಾರʼವನ್ನು ಆಸ್ಕರ್‌ ಗೆ ಕಳುಹಿಸಬೇಕು ಎಂದ ಕಂಗನಾ ರಣಾವತ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ʼಕಾಂತಾರʼ ಚಿತ್ರಕ್ಕೆ ಎಲ್ಲಾ ಕಡೆಯಿಂದ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಸೆಪ್ಟೆಂಬರ್‌ 30ರಂದು ತೆರೆಗ ಬಂದ ಚಿತ್ರ ಬಹುಬೇಡಿಕೆಯ ನಂತರ ಹಿಂದಿ, ತೆಲುಗು, ಮಲಯಾಳಂ ಅವತರಣಿಕೆಗಳಲ್ಲಿಯೂ ಬಿಡುಗಡೆಯಾಗಿದೆ. ಇದೀಗ ಬಾಲಿವುಡ್‌ ಸ್ಟಾರ್‌ ನಟಿ ಕಂಗನಾ ರಣಾವತ್‌ ಕೂಡ ಚಿತ್ರದ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದ್ದು ಕಾಂತಾರವನ್ನು ಆಸ್ಕರ್‌ ಗೆ ಕಳುಹಿಸಬೇಕು ಎಂದಿದ್ದಾರೆ.

ಮುಂದಿನ ವರ್ಷ ಆಸ್ಕರ್ ಪ್ರಶಸ್ತಿಗೆ ಕನ್ನಡ ಚಿತ್ರ ಕಾಂತಾರ ಭಾರತದ ಆಫೀಶಿಯಲ್ ಎಂಟ್ರಿಯಾಗಬೇಕು ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಭಾರತಕ್ಕೆ ಸರಿಯಾದ ಪ್ರಾತಿನಿಧ್ಯದ ಅಗತ್ಯವಿದೆ ಎಂದು ಅವರು ಹೇಳಿದರು ಮತ್ತು ಕಾಂತಾರವು ಇಡೀ ಜಗತ್ತು ನೋಡಬೇಕಾದ ಚಲನಚಿತ್ರವಾಗಿದೆ ಎಂದಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಂ ಸ್ಟೋರಿಯೊಂದನ್ನು ಹಂಚಿಕೊಂಡಿರುವ ಅವರು “ಕಾಂತಾರ ಮುಂದಿನ ವರ್ಷ ಆಸ್ಕರ್‌ಗೆ ಭಾರತದ ಪ್ರವೇಶವಾಗಬೇಕು ಎಂದು ನಾನು ಭಾವಿಸುತ್ತೇನೆ, ವರ್ಷ ಇನ್ನೂ ಮುಗಿಯಬೇಕಿದೆ ಮತ್ತು ಇನ್ನೂ ಉತ್ತಮ ಚಿತ್ರಗಳು ಬರಬಹುದು ಎಂದು ನನಗೆ ತಿಳಿದಿದೆ, ಆದರೆ ಆಸ್ಕರ್‌ ನಂತಹ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಸರಿಯಾದ ಪ್ರಾತಿನಿಧ್ಯದ ಅಗತ್ಯವಿದೆ. .. ನಿಗೂಢತೆಗಳ ಮತ್ತು ಅತೀಂದ್ರಿಯಗಳ ಈ ಭೂಮಿಯನ್ನು ಒಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಒಬ್ಬರು ಅದನ್ನು ಅಪ್ಪಿಕೊಳ್ಳಬಹುದು …. ಭಾರತವು ಒಂದು ಪವಾಡದಂತೆ … ನೀವು ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ನೀವು ನಿರಾಶೆಗೊಳ್ಳುತ್ತೀರಿ ಆದರೆ ನೀವು ಪವಾಡಕ್ಕೆ ಶರಣಾದರೆ ನೀವೂ ಒಂದಾಗಬಹುದು….ಕಾಂತಾರ ಒಂದು ಅನುಭವದ ಸತ್ಯವಾಗಿದ್ದು ಅದನ್ನು ಜಗತ್ತು ಅನುಭವಿಸಲೇಬೇಕು” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!