ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಭಾಷಾ ಸಂಘರ್ಷ ತಾರಕ್ಕೇರಿದ್ದು, ಮರಾಠಿ ಮಾತನಾಡಲು ಬರೋದಿಲ್ಲ ಎನ್ನುವ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ನಿರ್ವಾಹಕನ ಮೇಲೆ ಮರಾಠಿಗರು ಹಲ್ಲೆ ಮಾಡಿದ ಬೆನ್ನಲ್ಲಿಯೇ, ಶುಕ್ರವಾರ ರಾತ್ರಿ ಚಿತ್ರದುರ್ಗದಲ್ಲಿ ಮಹಾರಾಷ್ಟ್ರಕ್ಕೆ ಹೋಗುವ ಬಸ್ ತಡೆದು ಚಾಲಕನಿಗೆ ಕನ್ನಡಿಗರು ಮಸಿ ಬಳಿದಿದ್ದರು.
ಶನಿವಾರ ಕರ್ನಾಟಕ ಸಾರಿಗೆಯ ಐಷಾರಾಮಿ ಅಂಬಾರಿ ಬಸ್ಗೆ ಕಪ್ಪು ಮಸಿ ಬಳಿದು ಮಹಾರಾಷ್ಟ್ರದಲ್ಲಿ ಮನಸೇ ಪುಂಡಾಟ ನಡೆಸಿದೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರ ಉದ್ಧಟತನ ಮೆರೆದಿದ್ದು, ಪುಣೆಯಿಂದ ಬೆಳಗಾವಿಗೆ ಬರ್ತಿದ್ದ ಐಷಾರಾಮಿ ವೋಲ್ವೋ ಬಸ್ ತಡೆದು ಕಪ್ಪು ಮಸಿ ಬಳಿದಿದ್ದಾರೆ.
ಕನ್ನಡ ಬೋರ್ಡ್ಗೂ ಕಪ್ಪು ಮಸಿ ಬಳಿದು ಮನಸೇ ಕಾರ್ಯಕರ್ತರು ಉದ್ಧಟತನ ಮೆರೆದಿದ್ದಾರೆ. ಮರಾಠಿ ಭಾಷೆಯಲ್ಲಿ ಬಸ್ ಮೇಲೆ ಮನಸೆ ಎಂದು ಬರೆದು ಪುಂಡಾಟ ಮೆರೆದಿದ್ದಾರೆ.