ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಪ್ರಸಿದ್ಧಿ ಯಾತ್ರತಾಣ ಕೇದಾರನಾಥ್ ಮುಂಬರುವ ಮೇ 6 ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ.
ಶಿವನ ಐದನೇ ಜ್ಯೋತಿಲಿಂಗದ ದರ್ಶನಕ್ಕಾಗಿ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸಾಂಪ್ರದಾಯಿಕ ವೈದಿಕ ಆಚರಣೆಗಳ ನಂತರ ನಿನ್ನೆ ಮಹಾ ಶಿವರಾತ್ರಿ ಸಂದರ್ಭದಲ್ಲಿ ಬಾಬಾ ಕೇದಾರನಾಥ ಉಖಿಮಠದ ಓಂಕಾರೇಶ್ವರ ದೇವಾಲಯದಲ್ಲಿ ಭಗವಾನ್ ಕೇದಾರನಾಥನ ಬಾಗಿಲು ತೆರೆಯುವ ದಿನಾಂಕ ಅಂತಿಮಗೊಳಿಸಲಾಯಿತು.