ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಕಿರಣ್ನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲಸದಿಂದ ತೆಗೆದಿದ್ದ ಸಿಟ್ಟಿಗೆ ಕೊಲೆ ಮಾಡಿದ್ದಾಗಿ ಕಿರಣ್ ಹೇಳಿದ್ದಾನೆಂದು ವರದಿಯಾಗಿದೆ. ನಾಲ್ಕು ವರ್ಷಗಳಿಂದ ಕಿರಣ್ ಪ್ರತಿಮಾ ಕಾರ್ ಚಾಲಕನಾಗಿದ್ದ, ಗುತ್ತಿಗೆ ಆಧಾರದಲ್ಲಿ ಚಾಲಕ ವೃತ್ತಿಯಲ್ಲಿದ್ದ ಕಿರಣ್ ಕಳೆದ ತಿಂಗಳಷ್ಟೇ ಹೊಸ ಸರ್ಕಾರಿ ಕಾರ್ ಅಪಘಾತ ಮಾಡಿ ಕಚೇರಿಯಲ್ಲೇ ಕಾರ್ ಬಿಟ್ಟು ಪರಾರಿಯಾಗಿದ್ದ.
ಇದರಿಂದ ಪ್ರತಿಮಾ ಕೋಪಗೊಂಡಿದ್ದು, ಕೆಲಸದಿಂದ ತೆಗೆದಿದ್ದರು. ಆತ ಪ್ರತಿಮಾ ಬಳಿ ಕಾಲಿಗೆ ಬಿದ್ದು ಬೇಡಿಕೊಂಡು ಕೆಲಸಕ್ಕೆ ಸೇರಿಸಿಕೊಳ್ಳಿ ಎಂದಿದ್ದ. ಆದರೆ ಪ್ರತಿಮಾ ಒಪ್ಪಿರಲಿಲ್ಲ.
ಇನ್ನು ರೇಡ್ ಹೋಗುವ ಮಾಹಿತಿಯನ್ನು ಕಿರಣ್ ಲೀಕ್ ಮಾಡುತ್ತಿದ್ದ ಎನ್ನುವ ಆರೋಪವೂ ಎದುರಾಗಿದ್ದು, ಈ ಬಗ್ಗೆಯೂ ಪ್ರತಿಮಾ ಮಾತನಾಡಿ ಕೆಲಸದಿಂದ ತೆಗೆಯುವ ವಾರ್ನಿಂಗ್ ನೀಡಿದ್ದರು ಎನ್ನಲಾಗಿದೆ.