ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕುಶಾಕ್ ರಸ್ತೆಯಲ್ಲಿರುವ ಹೊಸ ವಸತಿ ನಿಲಯದಲ್ಲಿ ಗೃಹಪ್ರವೇಶ ಕಾರ್ಯಕ್ರಮ ನಡೆಸಿದ್ದು, ಹೊಸ ಆಟ ಆರಂಭವಾಗಿದೆ.
ಗೃಹಪ್ರವೇಶ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರ ತಂದೆ – ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅವರ ಪುತ್ರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕುಮಾರಸ್ವಾಮಿ ಸಹೋದರರು ಮತ್ತು ಸಹೋದರಿಯರು ಮತ್ತು ಎಚ್.ಡಿ. ಬಾಲಕೃಷ್ಣೇಗೌಡ ಸೇರಿದಂತೆ ಉಪಸ್ಥಿತರಿದ್ದರು.
ಇದಲ್ಲದೆ, ಒಂದು ಕಾಲದಲ್ಲಿ ಜನತಾದಳದ ನಿಷ್ಠಾವಂತ ನಾಯಕರಾಗಿದ್ದ ಕೇಂದ್ರ ಸಚಿವ ವಿ. ಸೋಮಣ್ಣ ಅವರೂ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಶುಭ ಹಾರೈಸಿದರು.
ಇಲ್ಲಿಯವರೆಗೆ, ಕುಮಾರಸ್ವಾಮಿ ಅವರು ಉಕ್ಕಿನ ಸಚಿವಾಲಯದ ಅತಿಥಿಗೃಹದಲ್ಲಿ ತಂಗಿದ್ದರು. ಇದೀಗ ಕುಶಾಕ್ ರಸ್ತೆಯಲ್ಲಿರುವ ಹೊಸ ವಸತಿ ನಿಲಯದಲ್ಲಿ ತಂಗಲಿದ್ದಾರೆ. ಈ ಹೊಸ ವಸತಿ ನಿಲಯವು ದೆಹಲಿಯ ಹೃದಯಭಾಗದಲ್ಲಿದ್ದು, ರಾಷ್ಟ್ರೀಯ ವೇದಿಕೆಯಲ್ಲಿ ಕುಮಾರಸ್ವಾಮಿಯವರ ರಾಜಕೀಯ ಪ್ರಭಾವದ ಹೊಸ ಹಂತವನ್ನು ಸೂಚಿಸುತ್ತಿದೆ.
ಇನ್ನು ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರ ಸಹೋದರಿ ಅನಸೂಯಾ ಅವರ ಪತಿ ಮತ್ತು ಬೆಂಗಳೂರು ಗ್ರಾಮಾಂತರ ಸಂಸದೆ ಡಾ. ಸಿ.ಎನ್. ಮಂಜುನಾಥ್ ಗೈರುಹಾಜರಾಗಿದ್ದು ಎದ್ದು ಕಾಣುತ್ತಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಜುನಾಥ್ ಅವರು, ನನಗೆ ಇತರ ಪೂರ್ವ ನಿಗದಿತ ಕಾರ್ಯಕ್ರಮಗಳಿದ್ದ ಕಾರಣ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗಲಿಲ್ಲ, ಆದರೆ, ಅವರಿಗೆ ಕರೆ ಮಾಡಿ ಶುಭ ಹಾರೈಸಿದ್ದೇನೆಂದು ಹೇಳಿದರು.