ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯಲ್ಲಿ ಮತ್ತೆ ಕೊರೋನಾ ಭೀತಿ ಶುರುವಾಗಿದ್ದು, ಕೊರೋನಾ ಆರ್ಭಟ ಹೆಚ್ಚಾಗುತ್ತಿದೆ. ಆರ್ಟಿಪಿಸಿಆರ್ ಟೆಸ್ಟ್ನ ವಿಟಿಎಮ್ ಕಿಟ್ ಮಾತ್ರ ಬಂದಿಲ್ಲ. ವಿಟಿಎಮ್ ಕಿಟ್ಗಳಿಲ್ಲದ ಕಾರಣ ಆರ್ಟಿಪಿಸಿಆರ್ ಟೆಸ್ಟಿಂಗ್ ಆರಂಭವಾಗಿಲ್ಲ. ಹಾಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರ್ಟಿಪಿಸಿಆರ್ ಟೆಸ್ಟ್ಗೆ ಗಂಟಲು ದ್ರವ ತೆಗೆದು ಬಾಕ್ಸ್ ಉಳಗಡೆ ಇಡುವ ವಿಟಿಎಮ್ ಕೊರತೆ ಉಂಟಾಗಿದೆ.
ಈ ಹಿಂದೆ ಕಳಿಸಿದ್ದ 3 ಸಾವಿರ ವಿಟಿಎಮ್ ಕಿಟ್ಗಳು ಅವಧಿ ಮುಗಿದ ಕಾರಣ ನಿಷ್ಕ್ರಿಯವಾಗಿದೆ. ಹೊಸ ವಿಟಿಎಮ್ಗೆ ಸಿಬ್ಬಂದಿಗಳು ಮನವಿ ಮಾಡಿದ್ದು, ಡಿಹೆಚ್ಒ ನಿರ್ಲಕ್ಷ್ಯದಿಂದ ಇನ್ನೂ ವಿಟಿಎಮ್ ಬಂದಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಡಿಹೆಚ್ಒ ಸುನೀಲ್ ಮತ್ತು ಟಿಹೆಚ್ಒ ಸಂಜಯ್ರಿಂದ ಕೊರೊನಾ ಟೆಸ್ಟಿಂಗ್ ಹಾಗೂ ಆರ್ಟಿಪಿಸಿಆರ್ ಲ್ಯಾಬ್ ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕು ಹಾಗೂ ಏರ್ಪೋಟ್ ಸ್ಯಾಂಪಲ್ ಟೆಸ್ಟಿಂಗ್ ಮಾಡುವ ಲ್ಯಾಬ್ ಒಳಗಿನ ಯಂತ್ರಗಳು ಹಾಗೂ ಸಿದ್ದೆತಗಳ ಪರಿಶೀಲನೆ ಮಾಡಲಾಗಿದೆ.
ಸರ್ಕಾರದ ಗೈಡ್ ಲೈನ್ಸ್ ನಂತರ ಏರ್ಪೋಟ್ನಲ್ಲಿ ಟೆಸ್ಟಿಂಗ್ ಆರಂಭವಾಗಲಿದೆ. ದೇವನಹಳ್ಳಿಯ ಸರ್ಕಾರಿ ಆಸ್ವತ್ರೆ ಆವರಣದಲ್ಲಿ ಆರ್ಟಿಪಿಸಿಆರ್ ಲ್ಯಾಬ್ ತೆರೆಯಲಾಗಿದ್ದು, ಸಿಬ್ಬಂದಿಯಿಂದ ಟೆಸ್ಟಿಂಗ್ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಈಗಾಗಲೆ ಜಿಲ್ಲಾಡಳಿತ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಟೆಸ್ಟಿಂಗ್ ಆರಂಭಿಸಿದೆ.