ತಿರುಮಲ ಘಾಟ್ ರಸ್ತೆಯಲ್ಲಿ ಚಿರತೆ ಓಡಾಟ: ಪ್ರಯಾಣಿಕರಿಗೆ ಎಚ್ಚರಿಕೆಯ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಿರುಮಲ ಘಾಟ್ ರಸ್ತೆಯಲ್ಲಿ ಚಿರತೆಗಳ ಓಡಾಟ ಮತ್ತೆ ಸಂಚಲನ ಮೂಡಿಸಿದೆ. ತಿರುಮಲದ ಮೊದಲ ಘಾಟ್ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಗಾಲಿ ಗೋಪುರದ ಬಳಿಯ ಘಾಟ್ ರಸ್ತೆಯ ಮರಗಳ ಪೊದೆಯಲ್ಲಿ ಚಿರತೆಯೊಂದು ಸಂಚಾರ ಕಂಡಿದೆ. ಚಿರತೆಯನ್ನು ವಾಹನ ಸವಾರರು ಸೆಲ್ ಫೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ.

ಮೊದಲನೇ ಪಾಸ್ ರಸ್ತೆಯಲ್ಲಿ 35ನೇ ತಿರುವಿನಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ತಿರುಪತಿಗೆ ತೆರಳುತ್ತಿದ್ದ ವಾಹನ ಸವಾರರು ಭಯಭೀತರಾಗಿದ್ದರು. ವಾಹನ ಸವಾರರನ್ನು ಕಂಡ ಚಿರತೆ ಪೊದೆಗೆ ನುಗ್ಗಿದೆ. ಘಾಟ್ ರಸ್ತೆಯಲ್ಲಿ ಚಿರತೆ ಕಂಡು ವಾಹನ ಸವಾರರು, ಭಕ್ತರು ಭಯಗೊಂಡಿದ್ದಾರೆ.

ಕೆಲ ವಾಹನ ಸವಾರರು ಚಿರತೆ ಸುತ್ತಾಡುತ್ತಿರುವ ಬಗ್ಗೆ ಟಿಟಿಡಿಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಟಿಟಿಡಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಚಿರತೆಯನ್ನು ಮತ್ತೆ ಕಾಡಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಈ ಹಿಂದೆ ಹಲವು ಬಾರಿ ಚಿರತೆ ಕಾಣಿಸಿಕೊಂಡಿತ್ತು. ಈ ರಸ್ತೆಯಲ್ಲಿ ಬರುವ ಸವಾರರು ಎಚ್ಚರಿಕೆಯಿಂದಿರುವಂತೆ ಟಿಟಿಡಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!