ಹೊಸದಿಗಂತ ಡಿಜಿಟಲ್ ಡೆಸ್ಕ್:
ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಮತ್ತು ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್ಗೆ ಒಂದು ದಿನದ ಪ್ರವಾಸದ ಪ್ಯಾಕೇಜ್ ಅನ್ನು ಬಿಎಂಟಿಸಿ ಪರಿಚಯಿಸಿದೆ. ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಲ್ಲಿ ಈ ಸೇವೆ ಲಭ್ಯ.
ಪ್ರವಾಸದ ಪ್ಯಾಕೇಜ್ಗೆ ‘ಬೆಂಗಳೂರು ಸುತ್ತೋಣ ಬನ್ನಿ’ ಎಂಬ ಘೋಷವಾಕ್ಯ ನೀಡಲಾಗಿದೆ. ಒಟ್ಟು 6 ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿರುವ ಪ್ಯಾಕೇಜ್ಗೆ ಒಬ್ಬರಿಗೆ 600 ರೂಪಾಯಿ ದರ ನಿಗದಿ ಮಾಡಲಾಗಿದೆ.
ಬೆಳಗ್ಗೆ 9ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ನಿಂದ ಪ್ರವಾಸ ಆರಂಭವಾಗಲಿದ್ದು ದೊಡ್ಡಬಳ್ಳಾಪುರ ನಗರದ ನೇಲದಾಂಜನೇಯ ದೇವಸ್ಥಾನ, ಶ್ರೀಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಮುದ್ದೇನಹಳ್ಳಿಯ ಜ್ಞಾನೀತೀರ್ಥ ಲಿಂಗ, ಸ್ಕಂದಗಿರಿಯ ಶ್ರೀ ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಪಾಪಾಘ್ನಿ ಮಠ, ಕಲ್ಯಾಣಿ(ಕಾರಂಜಿ) ಮತ್ತು ಈಶಾ ಫೌಂಡೇಶನ್ ಕ್ಷೇತ್ರಗಳಿಗೆ ಭೇಟಿ ನೀಡಬಹುದು. ರಾತ್ರಿ 7 ಗಂಟೆಗೆ ಮತ್ತೆ ಮೆಜೆಸ್ಟಿಕ್ನಲ್ಲಿ ಪ್ರವಾಸ ಮುಕ್ತಾಯವಾಗಲಿದೆ.