ಹೊಸದಿಗಂತ ವರದಿ ಗದಗ :
ಈಗಾಗಲೇ ಜನರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಬ್ರಾಂತಿಯಾಗಿದೆ ಸೆಪ್ಟೆಂಬರ್ ನಲ್ಲಿ ಏನಾಗುತ್ತೋ ನೋಡೋಣ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಕಾಂಗ್ರೆಸ್ ಆಂತರಿಕ ವಿಷಯದ ಬಗ್ಗೆ ಹೆಚ್ಚು ಮಾತಾಡಲ್ಲ. ಕಾಂಗ್ರೆಸ್ ಕಚ್ಚಾಟದಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ.
ಕಚ್ಚಾಟಕ್ಕೂ ಮುನ್ನ ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಶೂನ್ಯವಾಗಿದೆ.
ಈಗ ಸಾಲದ ಶೂಲಕ್ಕೆ ಕರ್ನಾಟಕ ಏರಿ. ಆರ್ಥಿಕವಾಗಿ ದಿವಾಳಿಯಾಗಿದೆ.
ರಾಜ್ಯದಲ್ಲಿ 50 ರಿಂದ 60 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆಯಿಂದ ವಸೂಲಾಗುತ್ತಿದೆ.ಇಷ್ಟಾಗಿಯೂ ಹಣ ಸಾಲುತ್ತಿಲ್ಲ ಅಂದರೆ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಕಿಡಿ ಕಾರಿದರು.