ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವರಾತ್ರಿ ಹಬ್ಬದ ನಿಮಿತ್ತ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥನ ಬಾಗಿಲು ತೆರೆಯುವ ದಿನಾಂಕ ಘೋಷಣೆ ಮಾಡುವುದಾಗಿ ಇಲ್ಲಿನ ಪ್ರಧಾನ ಅರ್ಚಕರು ಹೇಳಿದ್ದಾರೆ. ಸದ್ಯ ಕೇದಾರನಾಥ ಹಿಮದಿಂದ ಆವೃತವಾಗಿದ್ದು, ಕೇದಾರನಾಥನ ಚಳಿಗಾಲದ ಆವಾಸಸ್ಥಾನ ಓಂಕಾರೇಶ್ವರ ದೇವಾಲಯವನ್ನು ಎಂಟು ಕ್ವಿಂಟಾಲ್ ಹೂವುಗಳಿಂದ ಸಿಂಗರಿಸಲಾಗಿದೆ ಎಂದು ತಿಳಿದುಬಂದಿದೆ.
ದೇವಾಲಯ ತೆರೆಯುವ ದಿನಾಂಕ ಘೋಷಣೆ ಜೊತೆಗೆ ಪಂಚಮುಖಿ ಚರ ದೇವರ ಉತ್ಸವ ಡೋಲಿಯು ಉಖಿಮಠದಿಂದ ಕೈಲಾಸಕ್ಕೆ ಹೊರಡುವ ದಿನಾಂಕವನ್ನೂ ಘೋಷಿಸುವುದಾಗಿ ಹೇಳಲಾಗಿದೆ.