ಕಾರ್ಣಿಕ ನುಡಿದ ಮೈಲಾರ ಲಿಂಗೇಶ್ವರ: ಇಷ್ಟಕ್ಕೂ ಏನೀ ‘ಸಂಪಾಯಿತಲೇ ಪರಾಕ್’ನ ಗೂಡಾರ್ಥ?

ಹೊಸದಿಗಂತ ವರದಿ, ವಿಜಯನಗರ:

‘ಸಂಪಾಯಿತಲೇ ಪರಾಕ್…’ ಇದು ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಡೆಂಕಣಮರಡಿಯಲ್ಲಿ ಸೋಮವಾರ ಸಂಜೆ ನೆರವೇರಿದ ಮೈಲಾರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಣ್ಣ ನುಡಿದ ಕಾರ್ಣಿಕ.

ಸಂಪಾಯಿತಲೇ ಪರಾಕ್ ‌ಎಂಬ ಎರಡೇ ಶಬ್ದದಲ್ಲಿ ಈ ವರ್ಷದ ದೈವವಾಣಿ ಹೇಳಿದರು.

ಗೊರವಯ್ಯನ ಹೇಳಿಕೆಯಿಂದ ನೆರೆದಿದ್ದ ಲಕ್ಷಾಂತರ ಜನರಿಂದ ವ್ಯಕ್ತವಾದ ಹರ್ಷಾದ್ಘೋರ ಮುಗಿಲು ಮುಟ್ಟಿತು.

ಈ ಸಲ ಭಾರಿ ಮಳೆ, ಬೆಳೆ ಚೆನ್ನಾಗಿ ಆಗಿ ರೈತರ ಬಾಳು ಹಸನಾಗುತ್ತದೆ ಎಂದು ಕಾರ್ಣಿಕ ನುಡಿ ಅರ್ಥೈಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!