February 25, 2026
Wednesday, February 25, 2026
spot_img

ಮೈಲಾಪುರದಲ್ಲಿ ಮಲ್ಲಯ್ಯ ಜಾತ್ರೆ ವೈಭವ: ಭಂಡಾರದೊಡೆಯನಲ್ಲಿ ಮಿಂದೆದ್ದ ಭಕ್ತ ಗಣ

ಹೊಸದಿಗಂತ ವರದಿ, ಯಾದಗಿರಿ:

ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಮಕರ ಸಂಕ್ರಮಣ ದಿನವಾದ ಬುಧವಾರದಂದು ಅದ್ದೂರಿಯಾಗಿ ನಡೆಯಿತು.

ಎಲ್ಲೆಲ್ಲೂ ಭಂಡಾರದ ಧೂಳು, ಕಣ್ಣು ಹಾಯಿಸಿದಲ್ಲೆಲ್ಲ ಜನಸಾಗರ, ಬೆಂಡು-ಬತ್ತಾಸಿನ ಭರ್ಜರಿ ಮಾರಾಟ, ಬೆಲ್ಲದ ಜಿಲೇಬಿ, ಬಿಸಿಬಿಸಿ ಭಜ್ಜಿಯ ಘಮಘಮ, ಪಲ್ಲಕ್ಕಿ ಹೊತ್ತ ಪೂಜಾರಿಗಳು ಹಾಕುತ್ತಿರುವುದು ಕಂಡುಬಂದಿತು.

ಬೇರೆಡೆ ಯಂತೆ ಈ ಜಾತ್ರೆಯಲ್ಲಿ ರಥೋತ್ಸವ ಜರುಗುವುದಿಲ್ಲ. ಬದಲಿಗೆ ಕಬ್ಬಿಣದ ಸರಪಳಿ ಹರಿಯಲಾಗುತ್ತದೆ. ಹಲವು ವೈಶಿಷ್ಟ್ಯಗಳ ಮೈಲಾರಲಿಂಗೇಶ್ವರ ಗುಹಾಂತರ ದೇವಾಲಯಕ್ಕೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿ ನೆರೆಯ ಆಂಧ್ರ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಮಲ್ಲಯ್ಯನ ದರ್ಶನ ಪಡೆದು ಪುನೀತರಾದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !