ಮಳೆಯಿಂದಾಗಿ KKR ಟೀಂ ಜೊತೆಗಿನ ಮ್ಯಾಚ್‌ ಕ್ಯಾನ್ಸಲ್‌: ಟಿಕೆಟ್ ರೀಫಂಡ್ ಮಾಡಲಿದೆ RCB!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಿಗದಿಯಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಟಿಕೆಟ್ ರೀಫಂಡ್‌ ಮಾಡುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಘೋಷಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ ಮೇ 17ರಂದು ಪುನರಾರಂಭವಾಗಿತ್ತು. ಆದರೆ, ಶನಿವಾರ ನಡೆಯಬೇಕಿದ್ದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಮೇ 17 ರಂದು ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವು ಪ್ರತಿಕೂಲ ಹವಾಮಾನದಿಂದಾಗಿ ರದ್ದಾಗಿದ್ದರಿಂದ, ಎಲ್ಲ ಮಾನ್ಯ ಟಿಕೆಟ್ ಹೊಂದಿರುವವರು ಪೂರ್ಣ ರೀಫಂಡ್ ಪಡೆಯಲು ಅರ್ಹರಾಗಿದ್ದಾರೆ ಎಂದು ಫ್ರಾಂಚೈಸಿ ಹೇಳಿಕೆಯಲ್ಲಿ ತಿಳಿಸಿದೆ.

ಡಿಜಿಟಲ್ ಟಿಕೆಟ್ ಹೊಂದಿರುವವರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಬಳಸಿದ ಅವರ ಮೂಲ ಖಾತೆಗೆ 10 ವರ್ಕಿಂಗ್ ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ. ಮೇ 31ರೊಳಗೆ ನಿಮಗೆ ಮರುಪಾವತಿ ಸಿಗದಿದ್ದರೆ, ದಯವಿಟ್ಟು ಬುಕಿಂಗ್ ವಿವರಗಳೊಂದಿಗೆ [email protected] ಗೆ ಇಮೇಲ್ ಕಳುಹಿಸಿ. ಭೌತಿಕ ಟಿಕೆಟ್ ಹೊಂದಿರುವವರು ಮರುಪಾವತಿ ಪಡೆಯಲು ತಮ್ಮ ಮೂಲ ಟಿಕೆಟ್ ಅನ್ನು ಅವರು ಟಿಕೆಟ್ ಖರೀದಿಸಿದ ಅಧಿಕೃತ ಮೂಲಕ್ಕೆ ಒಪ್ಪಿಸಬೇಕಾಗುತ್ತದೆ. ಉಚಿತ ಟಿಕೆಟ್‌ಗಳಿಗೆ ಮರುಪಾವತಿ ಅನ್ವಯಿಸುವುದಿಲ್ಲ ಎಂದು ಅದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!