ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯ ತರಬೇತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವತಿಯಿಂದ ಇಂದು ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಒತ್ತಡ ನಿವಾರಣೆ ಮತ್ತು ಮಾನಸಿಕ ಆರೋಗ್ಯ ಕುರಿತು ತರಬೇತಿ ನೀಡಲಾಯಿತು.

ಈ ವೇಳೆ ಮಾತನಾಡಿದ ಮನೋವೈದ್ಯ ಡಾ. ಸಂದೀಪ್ , ಪ್ರಸ್ತುತ ದಿನದಲ್ಲಿ ತೀವ್ರತರ ಒತ್ತಡವನ್ನು ನಿರ್ವಹಿಸಲಾಗದೆ ಆತ್ಮಹತ್ಯ ಗೀಡಾಗುತ್ತಿರುವುದು ವಿಷಾದನೀಯ . ಆತ್ಮಹತ್ಯೆಗೀಡಾಗುತ್ತಿರುವವರು ಖಿನ್ನತೆಗೆ ಒಳಗಾಗಿರುತ್ತಾರೆ ಜೊತೆಗೆ ಖಿನ್ನತೆಗೆ ಒಳಗಾಗಿರುವವರು ಯಾರ ಜೊತೆ ಉತ್ತಮ ಸಂಬಂಧವನ್ನು ಅಥವಾ ಸಂವಹನವನ್ನು ಕೂಡ ಮಾಡುವುದಿಲ್ಲ . ಇಲ್ಲಿ ಬೇಜಾರು ಅತಿಯಾದ ಚಿಂತೆ ನನಗೆ ಯಾರು ಇಲ್ಲ ಎಂಬ ಮನೋಭಾವನೆ ಹಾಗೂ ನಕಾರಾತ್ಮಕ ಯೋಚನೆಗಳಿಂದ ಕೂಡಿರುತ್ತಾರೆ. ಎಲ್ಲವೂ ಕೂಡ ಖಿನ್ನತೆಯ ಲಕ್ಷಣಗಳಾಗಿವೆ . ಇದರಿಂದ ಆತ್ಮಹತ್ಯೆ ಪ್ರವೃತ್ತಿಗಳು ಹೆಚ್ಚಾಗುತ್ತಿದೆ . ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ಮನೋವೈದ್ಯರ ತಂಡದ ಬಳಿ ನಿಮ್ಮ ಸಮಸ್ಯೆಗಳನ್ನು ಒತ್ತಡಗಳನ್ನು ಹಂಚಿಕೊಳ್ಳಿ ಅವರ ಮುಖಾಂತರ ಆಪ್ತ ಸಮಾಲೋಚನೆಯನ್ನು ಅಥವಾ ಚಿಕಿತ್ಸೆಯನ್ನು ಪಡೆದು ಖಿನ್ನತೆಯಿಂದ ಹೊರ ಬರಬಹುದಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಸಂತೋಷ್ ಕುಮಾರ್ ಎಂ ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಮಾನಸಿಕ ಆರೋಗ್ಯ ಎನ್ನುವುದು ಅವಶ್ಯಕವಾಗಿದೆ. ಈ ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕಾದರೆ ಪ್ರತಿನಿತ್ಯವೂ ಎಲ್ಲರೂ ಸಹ ಧ್ಯಾನ, ಯೋಗ, ಪ್ರಾಣಾಯಾಮ, ನಿಮ್ಮ ಪ್ರೀತಿ ಪಾತ್ರದೊಡನೆ ಉತ್ತಮವಾದ ಬಾಂಧವ್ಯ ಸಂವಹನ, ದೈನಂದಿನ ಚಟುವಟಿಕೆಗಳಲ್ಲಿ, ಮನರಂಜನಾತ್ಮಕ ಚಟುವಟಿಕೆಗಳಲ್ಲಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆಯಿಂದ ಪ್ರತಿಯೊಬ್ಬರೂ ಕೂಡ ಒತ್ತಡ ರಹಿತ ಸಕಾರಾತ್ಮಕ ಮಾನಸಿಕ ಆರೋಗ್ಯವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಟೆಲಿ ಮನಸ್ 14416 ಗೆ ಕರೆ ಮಾಡಬಹುದು ಎಂದು ಎಲ್ಲಾ ಸಿಬ್ಬಂದಿ ವರ್ಗದವರಿಗೂ ಕೂಡ ತಿಳಿಸಿದರು .

ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಉಪ ಸಮಾದೆಸ್ಟರ್ ಸಂದೀಪ್, ಬೋಧಕರಾದ ಕಿಶೋರ್, ಆರೋಗ್ಯ ಇಲಾಖೆಯ ಶ್ರೀಮತಿ ಪದ್ಮಾವತಿ ಸೇರಿದಂತೆ ಇತರರು ಹಾಜರಿದ್ದರು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!