ದೆಹಲಿಯಲ್ಲಿ ಹಾಲಿನ ಟ್ಯಾಂಕರ್‌-ಕಾರ್‌ ಡಿಕ್ಕಿ, ಚೆಲ್ಲುತ್ತಿದ್ದ ಹಾಲಿಗಾಗಿ ಜನರ ಪೈಪೋಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದೆಹಲಿ-ಮೀರತ್​ ಎಕ್ಸ್​ಪ್ರೆಸ್​ ವೇನಲ್ಲಿ ವೇಗವಾಗಿ ಬಂದ್​ ಟ್ರಕ್​ ಹಾಲಿನ ಟ್ಯಾಂಕರ್​ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಟ್ಯಾಂಕರ್​ನಿಂದ ಹಾಲು ಚೆಲ್ಲಲಾರಂಭಿಸಿತ್ತು. ಅಪಘಾತದಲ್ಲಿ ಯಾರಿಗೆ ಏನಾಗಿದೆ ನೋಡದ ಜನರು ಹಾಲಿಗಾಗಿ ಸ್ಪರ್ಧೆ ಮಾಡಿಕೊಂಡಿದ್ದಾರೆ, ಪೈಪೋಟಿಯಲ್ಲಿ ಒಬ್ಬರನ್ನೊಬ್ಬರು ತಳ್ಳುತ್ತಾ ಹಾಲಿನ ಕಲೆಕ್ಷನ್‌ ಮಾಡಿಕೊಂಡಿದ್ದಾರೆ.

ಸ್ಥಳೀಯರು ಕೂಡಲೇ ಹಾಲಿನ ಟ್ಯಾಂಕರ್‌ಗೆ ಪಾತ್ರೆಗಳು, ಬಾಟಲಿಗಳು ಮತ್ತು ಪಾತ್ರೆಗಳೊಂದಿಗೆ ಬಂದು ಸುತ್ತುವರೆದು ಟ್ಯಾಂಕರ್‌ನಿಂದ ಹೊರಬರುವ ಹಾಲನ್ನು ತೆಗೆದುಕೊಂಡು ಹೋದರು.

ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ಎಬಿಇಎಸ್ ಕಾಲೇಜು ಬಳಿ ಈ ಅಪಘಾತ ಸಂಭವಿಸಿದ್ದು, ಮೀರತ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಪರಿಣಾಮ ಟ್ರಕ್ ಚಾಲಕ ಜಾರ್ಖಂಡ್ ಮೂಲದ 45 ವರ್ಷದ ಪ್ರೇಮ್ ಸಾಗರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!