ಮಿಂಚೌಂಗ್ ಅಬ್ಬರ: ತಮಿಳುನಾಡಿನಲ್ಲಿ ಮೃತರ ಸಂಖ್ಯೆ 17ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಂಚೌಂಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನಲ್ಲಿ ಜೀವ ತೆತ್ತವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಇಂದು ಚಂಡಮಾರುತವು ಆಂಧ್ರ ಪ್ರದೇಶದ ಮಧ್ಯ ಕರಾವಳಿಯ ಆಳವಾದ ಭಾಗಕ್ಕೆ ಚಲಿಸಿದೆ, ಇದು ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಾಪಟ್ಲಾದಿಂದ ಸುಮಾರು 100ಕಿ.ಮೀ ಉತ್ತರ ವಾಯುವ್ಯ ಮತ್ತು ಖಮ್ಮಮ್‌ನಿಂದ ಆಗ್ನೇಯಕ್ಕೆ 50 ಕಿ.ಮೀ ದೂರದಲ್ಲಿ ಚಂಡಮಾರುತ ಇಳಿಕೆಯಾಗಿದೆ. ಇನ್ನು 12 ಗಂಟೆಗಳಲ್ಲಿ ಚಂಡಮಾರುತ ಮತ್ತಷ್ಟು ದುರ್ಬಲಗೊಳ್ಳಲಿದೆ ಎಂದು ಹೇಳಲಾಗಿದೆ.

ತಮಿಳುನಾಡಿನಲ್ಲಿ ಚಂಡಮಾರುತದಿಂದಾಗಿ 17 ಮಂದಿ ಮೃತಪಟ್ಟಿದ್ದಾರೆ ಅದರಲ್ಲಿ ಆರು ಮಂದಿ ಗ್ರೇಟರ್ ಚೆನ್ನೈನವರಾಗಿದ್ದಾರೆ. ಚೆನ್ನೈನಲ್ಲಿಯೂ ಆಸ್ತಿಪಾಸ್ತಿ ಹಾನಿಯಾಗಿದೆ, ಜೊತೆಗೆ ರಾಜ್ಯಾದ್ಯಂತ ರೈತರ ಬೆಳೆಗಳು ನಷ್ಟವಾಗಿವೆ. ಚಂಡಮಾರುತದಿಂದಾದ ಹಾನಿಯನ್ನು ಗುರುತಿಸಲು ಭಾರತೀಯ ವಾಯುಪಡೆ ಸಮೀಕ್ಷೆ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!