ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಕೇಸ್ ಕುರಿತು ಎಸ್ಐಟಿ ತನಿಖೆ ಮುಗಿಯುವವರೆಗೂ ನಾನು ಮಾತನಾಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಸಾಕಷ್ಟು ಹೇಳಿಕೆಗಳನ್ನು ಹಲವಾರು ನೀಡುತ್ತಿರುವುದು ನಾನು ಕೂಡ ಗಮನಿಸಿದ್ದೇನೆ. ಎಸ್ಐಟಿ ತನಿಖೆ ಮುಗಿಯೋವರೆಗೂ ನಾವು ಮಾತಾಡೋದು ಸಮಂಜಸವಲ್ಲ. ವಾಸ್ತವಾಂಶ ಏನಿದೆ ಅಂತಾ ಗೊತ್ತಾಗೋದೆ ತನಿಖೆ ಮುಗಿದ ಮೇಲೆ ಎಂದು ತಿಳಿಸಿದ್ದಾರೆ.
ಎಸ್ಐಟಿಯಿಂದ ಅಂತಿಮ ತನಿಖೆ ಮುಗಿಯೋವರೆಗೂ ಏನು ಮಾತಾಡಲ್ಲ. ಸದನದಲ್ಲಿ ಈ ವಿಚಾರ ಪ್ರಸ್ತಾಪವಾಗಬಹುದು. ಅಲ್ಲಿ ಉತ್ತರ ನೀಡಲಾಗುತ್ತೆ ಎಂದಿದ್ದಾರೆ.