ಅಲ್ಪಸಂಖ್ಯಾತರು ಅಂದ್ರೆ ಬರೀ ಮುಸ್ಲಿಮರಲ್ಲ, ಸಿಖ್ ಸಮುದಾಯವೂ ಇದೆ: ಸರ್ಕಾರಕ್ಕೆ ಯತ್ನಾಳ್ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಅಲ್ಪ ಸಂಖ್ಯಾತರ ಹೆಸರಲ್ಲಿ ಮುಸ್ಲಿಂರಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡಲಾಗಿದೆ ಎಂದು ಇಂದಿನ ಕಲಾಪದಲ್ಲಿ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಸಕ ಯತ್ನಾಳ್, ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರೆಂದಲ್ಲ, ಸಿಖ್ ಸಮುದಾಯವೂ ಇದೆ ಎಂದು ಸರ್ಕಾರಕ್ಕೆ ನೆನಪಿಸಿದರು. ಜಮೀರ್ ಅಹ್ಮದ್ 30% ಮುಸ್ಲಿಮರಿಗೆ ಮಾತ್ರ ಸವಲತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ರಾಜಕೀಯ ಮಾಡಬೇಡಿ ಎಂದು ಹೇಳಿದರು. ಆದರೆ ತಾವು ರಾಜಕೀಯ ಮಾಡುತ್ತಿಲ್ಲ, ಅಲ್ಪಸಂಖ್ಯಾತರಲ್ಲಿರುವ ಎಲ್ಲರಿಗೂ ಸಮಾನವಾಗಿ ನೋಡಬೇಕೆಂದು ಯತ್ನಾಳ್ ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!