ಮಧ್ಯಪ್ರದೇಶದ ಗುರೂಜಿ ಮಹಾರಾಜ್ ದೇವಾಲಯಕ್ಕೆ ಮೋದಿ ಭೇಟಿ, ವಿಶೇಷ ಪ್ರಾರ್ಥನೆ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಪ್ರದೇಶದ ಇಸಾಘರ್ ನಲ್ಲಿರುವ ಗುರೂಜಿ ಮಹಾರಾಜ್ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಭೇಟಿಯ ಸಮಯದಲ್ಲಿ ಗುರೂಜಿ ಮಹಾರಾಜ್ ದೇವಾಲಯದಲ್ಲಿ ಆರತಿ ಮಾಡಿದ್ದಾರೆ. ಆನಂದಪುರ್ ಧಾಮ್ ನಲ್ಲಿರುವ ದೇವಾಲಯ ಸಂಕೀರ್ಣಕ್ಕೂ ಭೇಟಿ ನೀಡಿದ್ದಾರೆ.

ಆನಂದಪುರ್ ಧಾಮ್ ಅನ್ನು ಆಧ್ಯಾತ್ಮಿಕ ಮತ್ತು ಲೋಕೋಪಕಾರಿ ಉದ್ದೇಶಗಳಿಗಾಗಿ ಸ್ಥಾಪಿಸಲಾಗಿದೆ. 315 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಇದು 500 ಕ್ಕೂ ಹೆಚ್ಚು ಹಸುಗಳನ್ನು ಹೊಂದಿರುವ ಆಧುನಿಕ ಗೋಶಾಲೆಯನ್ನು ಹೊಂದಿದೆ ಮತ್ತು ಶ್ರೀ ಆನಂದಪುರ್ ಟ್ರಸ್ಟ್ ಕ್ಯಾಂಪಸ್ ಅಡಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದೆ. ಟ್ರಸ್ಟ್ ಸುಖಪುರ್ ಗ್ರಾಮದಲ್ಲಿ ದತ್ತಿ ಆಸ್ಪತ್ರೆ, ಸುಖಪುರ್ ಮತ್ತು ಆನಂದಪುರ್ ನಲ್ಲಿರುವ ಶಾಲೆಗಳು ಮತ್ತು ದೇಶಾದ್ಯಂತ ವಿವಿಧ ಸತ್ಸಂಗ ಕೇಂದ್ರಗಳನ್ನು ನಿರ್ವಹಿಸುತ್ತಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!