ಮುಂಗಾರು ವಿರಾಮ: ದೇಶದಲ್ಲಿ ಕಾಡುತ್ತಿದೆ ಶೇ.25ರಷ್ಟು ಮಳೆಯ ಕೊರತೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಬ್ಬರಿಸಿ ಕಾಲಿಟ್ಟಿದ್ದ ಮುಂಗಾರು ಬಳಿಕ ವಿರಾಮ ತೆಗೆದುಕೊಂಡಿರುವ ಪರಿಣಾಮವಾಗಿ ದೇಶದಲ್ಲಿ ಶೇ.25ರಷ್ಟು ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಜೂ.1 ರಿಂದ ಜೂ.8 ರವರೆಗೆ 20.4 ಒಟ್ಟು ಮಿಲಿಮೀಟರ್ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ವಾಡಿಕೆಯಂತೆ ಸುಮಾರು 27.2 ಮಿಲಿಮೀಟರ್ ಮಳೆಯಾಗಬೇಕು. ಆದರೆ ಮಾನ್ಸೂನ್ ಮಾರುತಗಳ ದಿಢೀರ್ ವಿರಾಮದಿಂದಾಗಿ ದೇಶದಲ್ಲಿ ಶೇ.25ರಷ್ಟು ಮಳೆಯ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ 29ರ ಸುಮಾರಿಗೆ ಮಹಾರಾಷ್ಟ್ರ ಮತ್ತು ಉತ್ತರ ಬಂಗಾಳದ ಕೆಲವು ಭಾಗಗಳಲ್ಲಿ ಮಾನ್ಸೂನ್ ಸ್ಥಗಿತಗೊಂಡಿದೆ. ಆದರೆ ದಕ್ಷಿಣ ಪರ್ಯಾಯ ದ್ವೀಪ ಭಾರತದ ಮೇಲೆ ಮಾನ್ಸೂನ್ ಸಕ್ರಿಯ ಹಂತವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!