WEATHER | ಇಂದಿನಿಂದ ಮುಂಗಾರು ಚುರುಕು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಂದಿನಿಂದ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳಲಿದ್ದು, ಹಲವೆಡೆ ಯೆಲ್ಲೋ,ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಕೊಡಗು, ವಿಜಯನಗರದಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಇದೇ ಜಿಲ್ಲೆಗಳಲ್ಲಿ ಜೂನ್ 11ರಿಂದ ಮತ್ತಷ್ಟು ಮಳೆ ಹೆಚ್ಚಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಪರಶುರಾಂಪುರ, ಕುಂದಾಪುರ, ಕಕ್ಕೇರಿ, ಸಿಂಧನೂರು, ಧಾರವಾಡ, ಕೋಟಾ, ಮಸ್ಕಿ, ಇಂಡಿ, ಔರಾದ್, ವಿಜಯಪುರ, ಮಂಠಾಳ, ನಿಪ್ಪಾಣಿ, ಹುಮ್ನಾಬಾದ್, ಕೂಡಲಸಂಗಮ, ಆಗುಂಬೆ, ಭಾಗಮಂಡಲ, ರಾಯಲ್ಪಾಡು, ಹರಪನಹಳ್ಳಿ, ಮದ್ದೂರು, ಝಲ್ಕಿ, ಯಡ್ರಾಮಿ, ಕೆಂಭಾವಿ, ಲಕ್ಷ್ಮೇಶ್ವರ, ಮುನಿರಾಬಾದ್, ನಲ್ವತವಾಡ, ಮುಲ್ಕಿ, ಕ್ಯಾಸಲ್​​ರಾಕ್, ಕುಮಟಾ, ಬೀದರ್, ಕನಕಪುರ, ಬರಗೂರು, ಕೋಲಾರ, ಗಂಗಾವತಿ, ಲಿಂಗಸುಗೂರು, ಇಳಕಲ್, ಗುತ್ತಲ್, ಬಿಳಗಿ, ಮಾನ್ವಿ, ಕುರ್ಡಿ, ಗುತ್ತಲ್, ಸುಳ್ಯ, ಅಂಕೋಲಾ, ಗೋಕರ್ಣ, ಮೂಡುಬಿದಿರೆ, ಗೇರುಸೊಪ್ಪ, ಕಾರ್ಕಳದಲ್ಲಿ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!