ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದ ತನಿಖಾಧಿಕಾರಿ ಬದಲಾಯಿಸುವಂತೆ ಅರ್ಜಿ ಹಾಕುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಈ ಬಗ್ಗೆ ಪ್ರತಿಕ್ರಿಯಿಸಿ ಲೋಕಾಯುಕ್ತ ಇಂದು ಕೂಡ ಅಂತಿಮ ವರದಿ ಸಲ್ಲಿಸುವುದು ಅನುಮಾನ ಇದೆ. ಅವರು ಮತ್ತೆ ಸಮಯವನ್ನು ಕೇಳುತ್ತಾರೆ. ನನಗೆ ಲೋಕಾಯುಕ್ತ ಎಸ್ಪಿ ಬಗ್ಗೆ ಅನುಮಾನವಿದ್ದು ತನಿಖಾಧಿಕಾರಿ ಬದಲಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇನೆ ಎಂದು ಹೇಳಿದ್ದಾರೆ.