ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾದ ಕೇದಾರನಾಥ ದೇವಾಲಯದ ದ್ವಾರಗಳು 22 ಏಪ್ರಿಲ್ 2026 ರಂದು ಭಕ್ತರಿಗೆ ತೆರೆಯಲಿವೆ. ಉತ್ತರಾಖಂಡದ ಹಿಮಾಲಯ ಪ್ರದೇಶದಲ್ಲಿರುವ ಈ ಪವಿತ್ರ ಶಿವಕ್ಷೇತ್ರಕ್ಕೆ ಪ್ರತಿವರ್ಷ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
ವೃಷಭ ಲಗ್ನದಲ್ಲಿ ಬೆಳಿಗ್ಗೆ 8 ಗಂಟೆಗೆ ಧಾಮದ ಬಾಗಿಲುಗಳು ತೆರೆಯಲಿದ್ದು, ಹೊಸ ತೀರ್ಥಯಾತ್ರಾ ಅವಧಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ದಿನಾಂಕವನ್ನು ಉಖಿಮಠದಲ್ಲಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ಘೋಷಿಸಲಾಗಿದೆ. ಚಳಿಗಾಲದಲ್ಲಿ ಕೇದಾರನಾಥನ ಉತ್ಸವ ಮೂರ್ತಿಯನ್ನು ಇಲ್ಲಿ ಇಡಲಾಗುತ್ತದೆ.
ಇದನ್ನೂ ಓದಿ:
ಇದೇ ವೇಳೆ ಚಾರ್ ಧಾಮ ಯಾತ್ರೆಯ ಇತರೆ ದೇವಾಲಯಗಳ ದಿನಾಂಕಗಳೂ ಪ್ರಕಟಗೊಂಡಿವೆ. ಬದರಿನಾಥ ದೇವಾಲಯ 23 ಏಪ್ರಿಲ್ 2026 ರಂದು ಬೆಳಿಗ್ಗೆ 6:15 ಕ್ಕೆ ದ್ವಾರ ತೆರೆದುಕೊಳ್ಳಲಿದೆ. ಗಂಗೋತ್ರಿ ದೇವಸ್ಥಾನ ಮತ್ತು ಯಮುನೋತ್ರಿ ದೇವಸ್ಥಾನಗಳು 19 ಏಪ್ರಿಲ್ 2026 ರಂದು ಅಕ್ಷಯ ತೃತೀಯದಂದು ಭಕ್ತರಿಗೆ ಮುಕ್ತವಾಗಲಿವೆ.
ಎತ್ತರ ಪ್ರದೇಶವಾಗಿರುವುದರಿಂದ ಯಾತ್ರಿಕರು ಹವಾಮಾನ ಹಾಗೂ ವಸತಿ ಸಿದ್ಧತೆಗಳನ್ನು ಮುಂಚಿತವಾಗಿ ಮಾಡಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.



