SHOCKING | ಬೆಂಗಳೂರಿನಲ್ಲಿ ಮಠಮಠ ಮಧ್ಯಾಹ್ನವೇ ಮರ್ಡರ್‌, ಬೆಚ್ಚಿಬಿದ್ದ ಶ್ರೀರಾಂಪುರ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಮಠಮಠ ಮಧ್ಯಾಹ್ನವೇ ಮರ್ಡರ್‌ ನಡೆದಿದ್ದು, ಶ್ರೀರಾಂಪುರ ಜನ ಬೆಚ್ಚಿಬಿದ್ದಿದ್ದಾರೆ.

ಕುಮಾರ್ (39) ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ಸ್ನೇಹಿತ ದಯಾಳ್‌ ಎನ್ನುವಾತನೇ ಮರ್ಡರ್‌ ಮಾಡಿದ್ದಾನೆ. ಪೊಲೀಸರು ದಯಾಳ್‌ನನ್ನು ವಶಕ್ಕೆ ಪಡೆದಿದ್ದಾರೆ.

ಕೊಲೆಯಾದ ಕುಮಾರ್ ಹಾಗೂ ಸ್ನೇಹಿತ ದಯಾಳ್ ಮಧ್ಯೆ ನಿನ್ನೆ ರಾತ್ರಿ ಹಣದ ವ್ಯವಹಾರದ ಹಿನ್ನೆಲೆ ಮಾತುಕತೆ ನಡೆದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಈ ಕೊಲೆ ನಡೆದಿದೆ ಎನ್ನಲಾಗಿದೆ. ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದರು.

ಕುಮಾರ್ ಶ್ರೀರಾಮಪುರದಲ್ಲಿ ಹೊಟೇಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಆರೋಪಿ ದಯಾಳ್, ಮೃತ ಕುಮಾರ್ ಕಳೆದ 15 ವರ್ಷದಿಂದ ಸ್ನೇಹಿತರಾಗಿದ್ದರು. ಕುಮಾರ್ ಹಾಗೂ ಸ್ನೇಹಿತರ ಮಧ್ಯೆ 50 ಲಕ್ಷ ರೂಪಾಯಿಗೂ ಅಧಿಕ ಹಣದ ವ್ಯವಹಾರ ನಡೆದಿತ್ತು.

ಫೈನಾನ್ಸ್ ಮಾಡಿಕೊಂಡಿದ್ದ ದಯಾಳ್‌ಗೆ ಇತ್ತೀಚೆಗೆ ಸಿಕ್ಕಾಪಟ್ಟೆ ಲಾಸ್ ಆಗಿತ್ತು. ಹೀಗಾಗಿ ಕುಮಾರ್‌ಗೆ ಹಣ ಹಿಂದಿರುಗಿಸುವಂತೆ ದಯಾಳ್‌ ಕೇಳಿದ್ದ. ಇದೇ ವಿಷಯಕ್ಕೆ ನಿನ್ನೆ ಕರೆಸಿ ಮದ್ಯಪಾನ ಮಾಡಿಸಿ ಹಣ ವಾಪಸ್ ಕೇಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕುಮಾರ್ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶ್ರೀರಾಮಪುರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಕೊಲೆಯಾದ ಸ್ಥಳದಲ್ಲಿ ಸಿಕ್ಕ ಸುಳಿವಿನ ಹಿನ್ನೆಲೆಯಲ್ಲಿ ಶ್ರೀರಾಮಪುರ ಪೊಲೀಸರು ಆರೋಪಿ ದಯಾಳ್ ಅನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!