ಅಭಿಮಾನದಿಂದಾಗಿ ದರ್ಶನ್‌ ಹಿಂದೆ ಹೋದ 11ನೇ ಆರೋಪಿ ನಾಗರಾಜ್‌ ರಾಚಯ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿಯಾಗಿರುವ ನಾಗರಾಜ್‌ ರಾಚಯ್ಯ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾನೆ.

ಸ್ಥಳ ಮಹಜರು ಮಾಡಲೆಂದು ನಾಗರಾಜ್ ರಾಚಯ್ಯನನ್ನ ಪೊಲೀಸರು ಕರೆದುಕೊಂಡು ಹೋಗಿದ್ದಾಗ ಮಾಡಿದ ತಪ್ಪಿಗೆ ಕಣ್ಣೀರು ಹಾಕುತ್ತಿದ್ದಾನೆ. ದರ್ಶನ್‌ ಕಟ್ಟಾ ಅಭಿಮಾನಿಯಾಗಿರುವ ರಾಚಯ್ಯ, ದರ್ಶನ್‌ ಜೊತೆ ಈ ಹಿಂದೆ ಹಲವು ಕಡೆ ಕಾಣಿಸಿಕೊಂಡಿದ್ದಾನೆ.

ಆಪ್ತನಾಗಿರುವ ನಾಗರಾಜ್ ರಾಚಯ್ಯ, ಅವರ ಮೇಲೆ ಅಪಾರವಾದ ಅಭಿಮಾನ ಹೊಂದಿದ್ದನು. ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಲಾಗಿತ್ತು. ಈ ಸಂಬಂಧ ಪೊಲೀಸ್​ ಠಾಣೆಗೆ ದೂರು ನೀಡಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಅಭಿಮಾನದಿಂದಾಗಿ ದರ್ಶನ್‌ ಹಿಂದೆ ಹೋಗಿ ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವುದಕ್ಕೆ ರಾಚಯ್ಯ ಕಣ್ಣೀರಿಟ್ಟಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!