ಹೊಸ ದಿಗಂತ ಡಿಜಿಟಲ್ ಡೆಸ್ಕ್:
‘ದೇವರ ಸ್ವಂತ ನಾಡು’ ಕೇರಳದ ಚುನಾವಣಾ ಅಖಾಡಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೇರಳದ ತಿರುವಲ್ಲದಲ್ಲಿ ಬಿಜೆಪಿ ಅಭ್ಯರ್ಥಿ ಪರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಮಧ್ಯಪ್ರಾಚ್ಯ ಯುದ್ಧದ ನಡುವೆ ಗಲ್ಫ್ ರಾಷ್ಟ್ರಗಳು ಭಾರತದ ಕುರಿತು ಕೆಟ್ಟಭಾವನೆ ಮೂಡುವಂತೆ ಮಾಡುವುದು ಕಾಂಗ್ರೆಸ್ ನ ಉದ್ದೇಶ. ಅದಕ್ಕಾಗಿ ನಾನಾ ಹೇಳಿಕೆಗಳನ್ನು ನೀಡುತ್ತಾರೆ ಎಂದು ಟೀಕಿಸಿದರು.
ಯುದ್ಧದ ನಡುವೆ ನಮ್ಮ ಮೇಲಿನ ಅಭಿಪ್ರಾಯ ಬದಲಾಗುವಂತೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಗಲ್ಫ್ ರಾಷ್ಟ್ರಗಳನ್ನು ಕೆರಳಿಸುವ ಹುನ್ನಾರ ನಡೆಸುತ್ತಿದೆ. ಆದರೆ ನಾನು ಕಾಂಗ್ರೆಸ್, ಎಲ್ಡಿಎಫ್, ಯುಡಿಎಫ್ ಜನರಿಗೆ ಹೇಳಲು ಬಯಸುತ್ತೇನೆ , ಚುನಾವಣೆ ಬಂದು ಹೋಗುತ್ತವೆ. ಆದರೆ ಗಲ್ಫ್ ರಾಷ್ಟ್ರದಲ್ಲಿರುವ ಲಕ್ಷಾಂತರ ಕೇರಳಿಗರ ರಕ್ಷಣೆ ಮೊದಲ ಆದ್ಯತೆ ಎಂದು ತಿಳಿಸಿದರು.
ಭಾರತೀಯರು ಇಂದು ಗಲ್ಫ್ ರಾಷ್ಟ್ರಗಳಲ್ಲಿ ಸುರಕ್ಷಿತರಾಗಿ ಇದ್ದಾರೆ. ಇದಕ್ಕೆ ಕಾರಣ ಅಲ್ಲಿನ ಜನರಲ್ಲಿ ನಮ್ಮವರು ಎಂಬ ಭಾವನೆ ಇದೆ. ಆದರೆ ನೀವು ಇಲ್ಲಿ ನೀಡುವ ಹೇಳಿಕೆಗಳಿಂದ ಆ ಭಾವನೆ ದೂರವಾಗಿ ಅಲ್ಲಿ ನೆಲೆಸಿರುವ ನಮ್ಮ ಜನರಿಗೆ ತೊಂದರೆಯಾಗಬಹುದು. ಹೀಗಾಗಿ ಅಸಂಬದ್ಧ ಮಾತುಗಳನ್ನು ನಿಲ್ಲಿಸಿ ಎಂದು ಗುಡುಗಿದರು.



