ಉಂಡ ಮನೆಗೆ ಕನ್ನ ಹಾಕಿದ ನೇಪಾಳಿ ದಂಪತಿ: ಚಿನ್ನಾಭರಣ ದೋಚಿ ಎಸ್ಕೇಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಹೆಚ್‌ಎಎಲ್ (HAL) ಬಳಿ ತಿರುಪತಿಗೆ ತೆರಳಿದ್ದ ಉದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ದೋಚಿ ನೇಪಾಳಿ ದಂಪತಿ ಪರಾರಿಯಾಗಿರುವ ಘಟನೆ ನಡೆದಿದೆ.

ನಗರದ ಹೆಚ್‌ಎಎಲ್ ವಾಸಿಯಾಗಿರುವ ಉದ್ಯಮಿ ರಮೇಶ್ ಅವರು ಕಳೆದ 3 ತಿಂಗಳ ಹಿಂದೆ ನೇಪಾಳಿ ಮೂಲದ ರಾಜ್ ಮತ್ತು ದೀಪಾ ದಂಪತಿಯನ್ನು ಸೆಕ್ಯೂರಿಟಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕೆಲಸಕ್ಕೆ ಸೇರಿದ ಈ ದಂಪತಿ, ತುಂಬಾ ನಾಜೂಕಾಗಿ ಎಲ್ಲಾ ಕೆಲಸ ಮಾಡುತ್ತಿದ್ದರು. ಅಲ್ಲದೇ ಕೆಲವೇ ದಿನಗಳಲ್ಲಿ ಮಾಲೀಕನ ನಂಬಿಕೆಗಳಿಸಿಕೊಂಡಿದ್ದರು. ದಂಪತಿಯ ನಯ-ವಿನಯ ನೋಡಿದ ರಮೇಶ್, ಕುಟಂಬ ಸಮೇತ ಮೇ 27ರಂದು ತಿರುಪತಿಗೆ ಹೊರಟಿದ್ದರು.

ಈ ವೇಳೆ ರಾಜ್ ಮತ್ತು ದೀಪಾಗೆ ಮನೆ ಕಡೆಗೆ ನೋಡಿಕೊಳ್ಳಿ ಎಂದು ಹೇಳಿ ತಿರುಪತಿಗೆ ತೆರಳಿದ್ದರು. ತಿರುಪತಿಗೆ ತೆರಳಿದ ಕೆಲವೇ ಗಂಟೆಗಳಲ್ಲಿ ರಮೇಶ್ ಅವರು ತಮ್ಮ ಮನೆಯ ಸಿಸಿಟಿವಿಯನ್ನು ಮೊಬೈಲ್ ಮೂಲಕ ನೋಡಿದಾಗ ಆಫ್ ಆಗಿತ್ತು.

ಬೆಂಗಳೂರಿನಲ್ಲಿ ಮಳೆ ಬರುತ್ತಿರುವುದರಿಂದ ಕರೆಂಟ್ ಹೋಗಿರಬೇಕು ಎಂದು ತಮ್ಮ ಪಾಡಿಗೆ ತಿರುಪತಿಯಲ್ಲಿ ದೇವರ ದರುಶನ ಪಡೆದು ಮಾರನೇ ದಿನ ವಾಪಸು ಆಗಿದ್ದರು. ಈ ವೇಳೆ ಮನೆಗೆ ಬಂದ ವೇಳೆ ಮನೆಯ ಬಾಗಿಲು ತೆರೆದಿತ್ತು. ಈ ವೇಳೆ ಮನೆ ಒಳಗೆ ಹೋಗಿ ಪರಿಶೀಲಿಸಿದಾಗ 2 ಕೆಜಿ ಚಿನ್ನ, 10 ಲಕ್ಷ ರೂ. ನಗದು, ಒಂದು ಲೈಸೆನ್ಸ್ ಹೊಂದಿರುವ ಗನ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!