ಹೊಸದಿಗಂತ ವಿಜಯಪುರ:
ಮುಖ್ಯಮಂತ್ರಿ ಬದಲಾವಣೆ ಚರ್ಚೆನೂ ಇಲ್ಲ, ಯಾವ ಬದಲಾವಣೆ ವಿಚಾರ ನಮ್ಮಲ್ಲಿ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕ ಚರ್ಚೆ ಆದರೆ, ನಾವೇನೂ ಮಾಡೋಕ್ಕೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಗುಂಡೂರಾವ್ ಬ್ಯಾಟಿಂಗ್ ಮಾಡಿದರು.
ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರರು. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ಅವರು ಇದ್ದಾಗ ಬೇರೆ ಮುಖ್ಯಮಂತ್ರಿ ಬಗ್ಗೆ ಮಾತಾನಾಡುವುದು ಎಷ್ಟು ಸರಿ ?. ಸ್ವಾಮಿಗಳು ಏನು ಬೇಕಾದರೂ ಮಾತನಾಡ್ಲಿ, ಅದಕ್ಕೆ ನಾವೇನೂ ಹೇಳೋಕ್ಕೆ ಆಗಲ್ಲ ಎಂದರು.