ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಸಿಂಧೂ ನದಿ ಕಾಲುವೆ ಮೂಲಕ ಮೂರು ಪಶ್ಚಿಮ ನದಿಗಳಿಂದ ಹೆಚ್ಚುವರಿ ನೀರನ್ನು ಪಂಜಾಬ್ಗೆ ತಿರುಗಿಸುವ ಪ್ರಸ್ತಾಪವನ್ನು ವಿರೋಧಿಸಿದ್ದಾರೆ.
ನಮ್ಮ ನೀರನ್ನು ಯಾರೂ ತೆಗೆದುಕೊಳ್ಳಬಾರದು. ಅದನ್ನು ನಾನು ಅನುಮತಿಸುವುದಿಲ್ಲ. ಮೊದಲು, ನಮ್ಮ ನೀರನ್ನು ನಮಗಾಗಿ ಬಳಸೋಣ. ನಂತರ ಇತರರ ಬಗ್ಗೆ ಮಾತನಾಡೋಣ ಎಂದು ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸಿಂಧೂ ಕಾಲುವೆಗಳಿಂದ ಮೂರು ನದಿಗಳಾದ ಸಿಂಧೂ, ಜೀಲಂ ಮತ್ತು ಚೆನಾಬ್ಗಳಿಂದ ಹೆಚ್ಚುವರಿ ನೀರನ್ನು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಕ್ಕೆ ತಿರುಗಿಸುವ ಉದ್ದೇಶಿಸಿತ 113-ಕಿಮೀ ದೂರದ ಕಾಲುವೆಗೆ ಸಂಬಂಧಿಸಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಜಮ್ಮುವಿನಲ್ಲಿ ಬರಗಾಲವಿದ್ದು, ನಲ್ಲಿಗಳು ಬತ್ತಿ ಹೋಗುತ್ತಿವೆ. ಸಿಂಧೂ ನದಿ ಒಪ್ಪಂದಡಿ ಈಗಾಗಲೇ ಮೂರು (ಪೂರ್ವ) ನದಿಗಳನ್ನು ಹೊಂದಿರುವ ಪಂಜಾಬ್ಗೆ ನಾನೇಕೆ ನೀರನ್ನು ಕಳುಹಿಸಬೇಕು? ಪಂಜಾಬ್ ನಮಗೆ ನೀರು ನೀಡಿದೆಯೇ ಎಂದು ಓಮರ್ ಪ್ರತಿವಾದಿಸಿದ್ದಾರೆ.
ಕೈಲಾಗದವನು ಮೈ ಪರಚಿಕೊಂಡನಂತೆ.ಒಂದೇ ಒಂದು ಜನಹಿತ ಕಾರ್ಯ ಮಾಡದೇ ರಾಜಭೋಗ ಅನುಭವಿಸಿದ ನಾಮರ್ಧ ಹೇಳಿಕೆ ಕೊಡುತ್ತಾನೆ.ಅಯೋಗ್ಯ.