ತಮಿಳುನಾಡಿನಲ್ಲಿ ಮತ್ತೊಂದು ಭಾಷಾ ಸಮರ ಬೇಡ: ಕೇಂದ್ರಕ್ಕೆ ಉದಯನಿಧಿ ಸ್ಟಾಲಿನ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ಶಿಕ್ಷಣ ನೀತಿ, ತ್ರಿಭಾಷಾ ವ್ಯವಸ್ಥೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಡಿಎಂಕೆ ಚೆನ್ನೈನಲ್ಲಿ ಪ್ರಮುಖ ಪ್ರತಿಭಟನೆಯನ್ನು ಆಯೋಜಿಸಿತ್ತು.

ಪ್ರತಿಭಟನೆಯಲ್ಲಿ ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಭಾಗವಹಿಸಿದ್ದರು. ಇದೇ ವೇಳೆ ಡಿಎಂಕೆ ಮೈತ್ರಿಕೂಟದ ಪಕ್ಷದ ಮುಖಂಡರು ಎಂಡಿಎಂಕೆ ವೈಕೊ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಸೆಲ್ವಪೆರುಂತಗೈ, ವಿಸಿಕೆ ಅಧ್ಯಕ್ಷ ತಿರುಮಾವಲವನ್ ಎಂಪಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಅಧ್ಯಕ್ಷ ಕಾದರ್ ಮೊಹಿದೀನ್, ಟಿಎಂಎಂಕೆ ರಾಜ್ಯ ಕಾರ್ಯದರ್ಶಿ ಅಬ್ದುಲ್ ಸಮದ್, ತಮಿಳಗ ವಲೂರಿಮಾಯಿ ಪಕ್ಷದ ಮುಖ್ಯಸ್ಥ ವೇಲ್ಮುರುಗನ್ ಮತ್ತು ಇತರ ಮೈತ್ರಿ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಮಿಳುನಾಡಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕು ಹಾಗೂ ರಾಜ್ಯದಲ್ಲಿ ತ್ರಿಭಾಷಾ ನೀತಿ ಹೇರುವುದನ್ನು ತಡೆಯಬೇಕು ಎಂಬ ಘೋಷಣಾ ಫಲಕಗಳನ್ನು ಹಿಡಿದು ಡಿಎಂಕೆ ಹಾಗೂ ಮೈತ್ರಿ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಮಿಳುನಾಡು ಸಚಿವರಾದ ಅನ್ಬಿಲ್ ಮಹೇಶ್ ಪೊಯಮೊಳಿ, ಸೇಕರ್ ಬಾಬು, ಮಾ. ಸುಬ್ರಮಣಿಯನ್, ಡಿಎಂಕೆ ಶಾಸಕರು ಮತ್ತು ಸಂಸದರಾದ ತಮಿಳಚಿ ತಂಗಪಾಂಡಿಯನ್ ಮತ್ತು ಕನಿಮೊಳಿ ಸೋಮು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!