ಬಿಜೆಪಿ ಯುವ ಮೋರ್ಚಾ ವಿರುದ್ಧ ಹಲ್ಲೆಗೆ ದಿಗ್ವಿಜಯ್ ಸಿಂಗ್’ಗೆ ಜೈಲು ಶಿಕ್ಷೆ ಘೋಷಿಸಿದ ಜಿಲ್ಲಾ ನ್ಯಾಯಾಲಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತೀಯ ಜನತಾ ಯುವ ಮೋರ್ಚ (ಬಿಜೆವೈಎಂ) ಕಾರ್ಯಕರ್ತರ ಮೇಲೆ ದಾಳಿಗೆ ಪ್ರಚೋದಿಸಿದ್ದ ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಜಿಲ್ಲಾ ನ್ಯಾಯಾಲಯವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನೇತಾರ ದಿಗ್ವಿಜಯ್ ಸಿಂಗ್ ಅವರಿಗೆ ಒಂದು ವರ್ಷದ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ಜುಲೈ 17, 2011ರಂದು ಇವರ ವಾಹನ ಉಜ್ಜಯಿನಿ ಮುಖಾಂತರ ಸಾಗುವಾಗ ಬಿಜೆವೈಎಂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಯಾಗಿತ್ತು.

“ಹತ್ತು ವರ್ಷಗಳ ಹಿಂದಿನ ಪ್ರಕರಣದಲ್ಲಿ, ಪ್ರಾರಂಭಿಕ ಎಫ್ ಐ ಆರ್ ನಲ್ಲಿ ಸಹ ನನ್ನ ಹೆಸರಿರಲಿಲ್ಲ. ನಂತರ ರಾಜಕೀಯ ಕಾರಣಗಳಿಗಾಗಿ ನನ್ನ ಹೆಸರು ಸೇರಿಸಿದ ಈ ಪ್ರಕರಣದಲ್ಲಿ ಹೈಕೋರ್ಟಿಗೆ ಮೇಲ್ಮನವಿ ಹೋಗುತ್ತೇವೆ” ಎಂದು ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here