ನಾಳೆ ಪಾಕಿಸ್ತಾನದ ಗಡಿಯಲ್ಲಿರುವ 5 ರಾಜ್ಯಗಳಲ್ಲಿ ಆಪರೇಷನ್​ ಶೀಲ್ಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್, ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಮೇ 31ರಂದು ಆಪರೇಷನ್​ ಶೀಲ್ಡ್ ​ ಅಡಿಯಲ್ಲಿ ಅಣಕು ಕವಾಯತು ನಡೆಯಲಿದೆ.

ಗಡಿಗಳಲ್ಲಿ ಮೂರು ರಾತ್ರಿಗಳ ಕಾಲ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಭೀಕರ ಘರ್ಷಣೆಗಳ ನಂತರ ಈ ಅಣಕು ಕವಾಯತು ನಡೆಸಲಾಗುತ್ತಿದೆ.

ಈ ಕವಾಯತು ಪಾಕಿಸ್ತಾನದ ಗಡಿಯಲ್ಲಿರುವ ಐದು ರಾಜ್ಯಗಳಲ್ಲಿ ನಡೆಯಲಿದೆ ಅವುಗಳೆಂದರೆ ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರ . ಇದನ್ನು ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಅಗ್ನಿಶಾಮಕ ಸೇವೆಗಳು ಮತ್ತು ಗೃಹರಕ್ಷಕ ದಳದ ನಿರ್ದೇಶನಾಲಯವು ಆಯೋಜಿಸಿದೆ.

ಪೊಲೀಸ್, ಮಿಲಿಟರಿ ಮತ್ತು ಸ್ಥಳೀಯ ಸರ್ಕಾರ ಸೇರಿದಂತೆ ವಿವಿಧ ಸಂಸ್ಥೆಗಳ ನಡುವೆ ಸುಗಮ ಸಂವಹನ ಮತ್ತು ಸಮನ್ವಯವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ವೈಮಾನಿಕ ಬೆದರಿಕೆಗಳು, ಡ್ರೋನ್ ದಾಳಿಗಳು ಮತ್ತು ಇತರ ತುರ್ತು ಪರಿಸ್ಥಿತಿಗಳಂತಹ ಸನ್ನಿವೇಶಗಳನ್ನು ಒಳಗೊಂಡ ಅಣಕು ಅಭ್ಯಾಸಗಳನ್ನು ನಡೆಸುವುದು.ಸುರಕ್ಷತಾ ಶಿಷ್ಟಾಚಾರಗಳು ಮತ್ತು ತುರ್ತು ಕಾರ್ಯವಿಧಾನಗಳ ಬಗ್ಗೆ ನಾಗರಿಕರಿಗೆ ತಿಳಿ ಹೇಳಲಾಗುತ್ತದೆ.

ಮೇ 31ರಂದು ಸಂಜೆ 5 ಗಂಟೆಯಿಂದ ಅಣಕು ಕವಾಯತು ನಡೆಸಲು ನಿರ್ಧರಿಸಲಾಗಿದೆ. ವಾಯು ದಾಳಿ ಎಚ್ಚರಿಕೆ, ಶತ್ರುಗಳ ದಾಳಿ ಸಂದರ್ಭದಲ್ಲಿ ಸ್ಥಳಾಂತರಿಸುವಿಕೆ, ವಾಯು ಪಡೆ ಹಾಗೂ ನಾಗರಿಕ ರಕ್ಷಣಾ ನಿಯಂತ್ರಣಾ ಕೊಠಡಿಗಳ ನಡುವೆ ಹಾಟ್​ಲೈನ್ ಸಕ್ರಿಯಗೊಳಿಸುವುದು, ಹೆಚ್ಚಿನ ಜನರಿಗೆ ಗಾಯಗಳಾದ ಸಂದರ್ಭದಲ್ಲಿ ವೈದ್ಯಕೀಯ ತಂಡ ಹೆಚ್ಚಿಸುವುದು ಇತರೆ ವಿಚಾರಗಳು ಕವಾಯತು ಭಾಗವಾಗಿರಲಿದೆ.

ಆಪರೇಷನ್ ಶೀಲ್ಡ್ ಎಂಬುದು ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಅಣಕು ಕವಾಯತು ಆಗಿದ್ದು , ತುರ್ತು ಪರಿಸ್ಥಿತಿಗಳಿಗೆ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಭಾರತದ ಸನ್ನದ್ಧತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಒಂದೊಮ್ಮೆ ಡ್ರೋನ್, ಬಾಂಬ್ ದಾಳಿಯಂತಹ ತುರ್ತು ಪರಿಸ್ಥಿತಿಗಳು ಎದುರಾದರೆ ನಾಗರಿಕರು ಧೈರ್ಯಗೆಡದೆ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು, ಹೇಗೆ ತಮ್ಮನ್ನು ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಕೆಲವು ವಿಚಾರಗಳನ್ನು ತಿಳಿಸಿಕೊಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!