ಹೊಸ ದಿಗಂತ ಡಿಜಿಟಲ್ ಡೆಸ್ಕ್
ಭಾರತೀಯ ಸೇನೆಯ ಆಪರೇಶನ್ ಸಿಂದೂರ್ ಕಾರ್ಯಾಚರಣೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದ್ದು, ಪಾಕಿಸ್ತಾನದ ಕುತಂತ್ರ ಬುದ್ದಿಗೆ ಸರಿಯಾದ ಪಾಠವನ್ನೇ ಕಲಿಸಿದೆ.
ಇದೀಗ ಭಾರತೀಯ ಸೇನೆಯ ಈ ಆಪರೇಶನ್ ಸಿಂದೂರ್ ಸಾಹಸಗಾಥೆಯನ್ನು ಉತ್ತರಖಂಡದ ಮದರಸಾ ಶಾಲೆಗಳಲ್ಲಿ ಪಠ್ಯದ ರೂಪದಲ್ಲಿ ಸೇರಿಸಲು ನಿರ್ಧರಿಸಲಾಗಿದೆ.
ಉತ್ತರಖಂಡದಲ್ಲಿ 451 ಮದರಸಾ ಕೇಂದ್ರಗಳಿವೆ. ಇದರಲ್ಲಿ 50,000 ವಿದ್ಯಾರ್ಥಿಗಳಿದ್ದಾರೆ. ಸೇನೆಯ ಶೌರ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಆಪರೇಷನ್ ಸಿಂದೂರ್’ ಬಗ್ಗೆ ಪಾಠ ಮಾಡಲಾಗುತ್ತದೆ.
ಉತ್ತರಾಖಂಡ ಮದರಸಾ ಮಂಡಳಿಯ ಅಧ್ಯಕ್ಷ ಮುಫ್ತಿ ಶಮೂನ್ ಖಾಸ್ಮಿ, ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ನಂತರ ಈ ನಿರ್ಧಾರ ಘೋಷಿಸಿದ್ದಾರೆ. ಯಶಸ್ವಿ ಕಾರ್ಯಾಚರಣೆಗಾಗಿ ಸಚಿವರನ್ನು ಅಭಿನಂದಿಸಿದ ಅವರು, ಸಶಸ್ತ್ರ ಪಡೆಗಳು ತೋರಿದ ಶೌರ್ಯದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಇದಕ್ಕಾಗಿ ಮದರಾಸದಲ್ಲಿ ಪಠ್ಯ ಕ್ರಮ ಸೇರಿಸುವುದಾಗಿ ಹೇಳಿದ್ದಾರೆ.