ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಪೆಹಲ್ಗಾವ್ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ ಅಮಾಯಕ ಪ್ರವಾಸಿಗರಿಗಾಗಿ ದೇಶಕ್ಕೆ ದೇಶವೇ ಮಿಡಿಯುತ್ತಿದ್ದು, ಬಲಿದಾನವಾದವರ ಆತ್ಮಕ್ಕೆ ಚಿರಶಾಂತಿ ಕೋರಿ ಮಂಗಳೂರಿನ ಸಾನಿಧ್ಯದ ವಿಶೇಷ ಮಕ್ಕಳು ಮೌನ ಪ್ರಾರ್ಥನೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಜೊತೆಗೆ ಇಂಥ ದುರ್ಘಟನೆಗಳು ಭಾರತ ದೇಶದ ಯಾವ ಮೂಲೆಯಲ್ಲೂ ನಡೆಯದಿರಲಿ ಎಂದು ಅವರು ಉರಿವ ಮೇಣದ ಬತ್ತಿಯನ್ನು ಹಿಡಿದು ದೇವರಿಗೆ ಪ್ರಾರ್ಥನೆ ಸಲ್ಲಿದ್ದಾರೆ.