ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮೇಶ್ವರಂದಲ್ಲಿ ನಿರ್ಮಿಸಲಾಗಿರುವ ಭಾರತದ ಮೊದಲ ಲಿಫ್ಟ್ ಸೇತುವೆ ಹಾಗೂ ಇತರ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 6ರಂದು ಅಂದರೆ ನಾಳೆ ಲೋಕಾರ್ಪಣೆ ಮಾಡಲಿದ್ದಾರೆ.
ನೂತನ ಪಂಬನ್ ರೈಲು ಸೇತುವೆ, ರಾಮೇಶ್ವರಂ–ತಂಬರಮ್ (ಚೆನ್ನೈ) ಹೊಸ ರೈಲು ಸೇವೆ ಹಾಗೂ ಕರಾವಳಿ ಭದ್ರತಾ ಪಡೆ ಹಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 6) ಮಧ್ಯಾಹ್ನ ಚಾಲನೆ ನೀಡಲಿದ್ದಾರೆ. ಲಿಫ್ಟ್ ಸೇತುವೆ ಲಂಬವಾಗಿ ತೆರೆಯುತ್ತಿದ್ದಂತೆ ಭದ್ರತಾ ಪಡೆ ಹಡಗು ಸಾಗಲಿದ್ದು, ಕಾರ್ಯಾಚರಣೆ ಆರಂಭವಾಗಲಿದೆ.
550 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೇತುವೆಯ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಮುನ್ನ, ಕರಾವಳಿ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಲೋಕಾರ್ಪಣೆ ಜೊತೆಗೆ ತಮಿಳುನಾಡಿನಲ್ಲಿ ಕೈಗೊಳ್ಳಲಿರುವ ಸುಮಾರು ₹ 8,300 ಕೋಟಿ ಮೊತ್ತದ ವಿವಿಧ ರೈಲು ಹಾಗೂ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.