ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದ ವಕೀಲ ದೇವರಾಜೇಗೌಡ ಅವರಿಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಸಾರ್ವಜನಿಕ ವಿಚಾರಣೆಗೆ ಮತ್ತೊಮ್ಮೆ ಹಾಜರಾಗುವಂತೆ ಎಸ್ಐಟಿ ಹೇಳಿದೆ.
ಇದರಿಂದ ಎಸ್ಐಟಿ ದೇವರಾಜೇಗೌಡರನ್ನು ಗುರಿಯಾಗಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ ಪ್ರಜ್ವಲ್ ರೇವಣ್ಣನ ಮಾಜಿ ಚಾಲಕ ಕಾರ್ತಿಕ್ ಗೌಡ ಅವರಿಗೂ ನೋಟೀಸ್ ನೀಡಲಾಗಿದೆ.
ದೇವರಾಜೇಗೌಡ ಅವರು ಇತ್ತೀಚೆಗೆ ಹಲವು ದಾಖಲೆಗಳನ್ನು ಪ್ರಕಟಿಸಿ ಮಾಧ್ಯಮಗಳ ಮುಂದೆ ಕೆಲವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಂತರ ಎಸ್ಐಟಿ ದೇವರಾಜೇಗೌಡ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅವರ ಬಳಿಯಿರುವ ಎಲ್ಲ ಹೆಚ್ಚುವರಿ ಸಾಕ್ಷ್ಯಗಳು, ಛಾಯಾಚಿತ್ರಗಳು ಮತ್ತು ಧ್ವನಿಮುದ್ರಿಕೆಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ.