ವಿಮಾನ ದುರಂತ : ಗುಜರಾತಿ ನಿರ್ದೇಶಕ ಮಹೇಶ್ ಜಿರಾವಾಲಾ ಸಾವು ದೃಢ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜೂನ್ 12 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನದ ಭೀಕರ ಅಪಘಾತದ ಕೆಲವು ದಿನಗಳ ನಂತರ ಗುಜರಾತಿ ಚಲನಚಿತ್ರ ನಿರ್ಮಾಪಕ ಮಹೇಶ್ ಕಲವಾಡಿಯಾ (ಮಹೇಶ್ ಜಿರಾವಾಲಾ) ಅವರ ಸಾವು ಅಧಿಕೃತವಾಗಿ ದೃಢಪಟ್ಟಿದೆ.

ಡಿಎನ್‌ಎ ಪರೀಕ್ಷೆಯ ಫಲಿತಾಂಶ, ಮಹೇಶ್ ಅವರ ಕುಟುಂಬವು ಒದಗಿಸಿದ ಮಾದರಿಗಳೊಂದಿಗೆ ಹೊಂದಿಕೆಯಾಗುತ್ತಿದೆ. ವಿಮಾನದಲ್ಲಿ ಪತನದಲ್ಲಿ ಮೃತಪಟ್ಟವರಲ್ಲಿ ಅವರೂ ಒಬ್ಬರು ಎಂದು ಖಚಿತಪಡಿಸಲಾಗಿದೆ.

ಏರ್ ಇಂಡಿಯಾ ವಿಮಾನ ಪತನದ ನಂತರ ಮಹೇಶ್ ಅವರು ನಾಪತ್ತೆಯಾಗಿದ್ದು, ಅವರ ಕುಟುಂಬವು ಡಿಎನ್‌ಎ ಮಾದರಿಗಳನ್ನು ನೀಡಿತ್ತು ಮತ್ತು ಅವರ ಮೊಬೈಲ್ ಫೋನ್ ನೆಟ್ ವರ್ಕ್ ಅಪಘಾತ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿ ಕೊನೆಯದಾಗಿ ಪತ್ತೆಯಾಗಿತ್ತು.

ಜೂನ್ 12 ರಂದು ಮಧ್ಯಾಹ್ನ 1:39 ಕ್ಕೆ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರದ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಅಪ್ಪಳಿಸಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 242 ಜನರಲ್ಲಿ 241 ಜನ ಮತ್ತು ಕೆಳಗಡೆ ಇದ್ದ 29 ಜನ ಸಾವನ್ನಪ್ಪಿದರು.

ನರೋಡಾ ನಿವಾಸಿ, ಸಂಗೀತ ಆಲ್ಬಮ್‌ಗಳ ನಿರ್ದೇಶಕಾರಿಗಿದ್ದ ಮಹೇಶ್ ಕಲಾವಾಡಿಯಾ ಅವರು ಅಂದು ಮಧ್ಯಾಹ್ನ ಲಾ ಗಾರ್ಡನ್ ಪ್ರದೇಶದಲ್ಲಿ ಯಾರನ್ನಾದರೂ ಭೇಟಿಯಾಗಲು ಹೋಗಿರಬಹುದು ಎಂದು ಅವರ ಪತ್ನಿ ಹೇತಲ್ ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!