ಕಪ್ಪೆಯೊಂದಿಗೆ ಪ್ಲಾಸ್ಟಿಕ್ ನುಂಗಿದ ನಾಗರ: ನೀರು ಕುಡಿಸಿ ಕಕ್ಕಿಸಿದ ಉರಗ ತಜ್ಞ

ಹೊಸದಿಗಂತ ವರದಿ ಕುಶಾಲನಗರ:

ಕಪ್ಪೆಯೊಂದಿಗೆ ಪ್ಲಾಸ್ಟಿಕ್ ನುಂಗಿದ ನಾಗರಹಾವನ್ನು ಹಿಡಿದು, ಅದಕ್ಕೆ ನೀರು ಕುಡಿಸಿ ಪ್ಲಾಸ್ಟಿಕ್’ನ್ನು ಕಕ್ಕಿಸಿ ರಕ್ಷಿಸಿದ ಘಟನೆ ಇಲ್ಲಿಗೆ ಸಮೀಪದ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ.

ಗೊಂದಿಬಸವನಹಳ್ಳಿ ಗ್ರಾಮದ ಶಶಿ ಎಂಬವರ ಮನೆಯ‌ ಒಳಗಡೆ ನಾಗರಹಾವು ಕಾಣಿಸಿಕೊಂಡ ಸಂದರ್ಭದಲ್ಲಿ ಉರಗ ತಜ್ಞ ಗಫೂರ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗಫೂರ್ ಮನೆಯೊಳಗಿದ್ದ ನಾಗರಹಾವನ್ನು ಹಿಡಿದು ಹೊರಕ್ಕೆ ತಂದು ನೋಡಿದಾಗ ಹಾವಿನ ಗಂಟಲು ದಪ್ಪವಾಗಿರುವುದು ಕಾಣಿಸಿದೆ. ಇದನ್ನು ಗಮನಿಸಿದ ಉರಗ ತಜ್ಞ ಗಪೂರ್, ನಾಗರಹಾವಿನ ಬಾಯಿಗೆ ನೀರು ಕುಡಿಸುವುದರ ಮೂಲಕ ಪ್ಲಾಸ್ಟಿಕ್ ಮತ್ತು ಕಪ್ಪೆಯನ್ನು ಹೊರತೆಗೆದಿದ್ದಾರೆ.

ಕಪ್ಪೆ ನುಂಗುವ ಭರದಲ್ಲಿ ಹಾವು ಪ್ಲಾಸ್ಟಿಕ್’ನೊಳಗಿದ್ದ ಕಪ್ಪೆಯನ್ನೂ ಸೇರಿ ನುಂಗಿತ್ತು. ಆದರೆ ಅದೇ ಹಾವಿಗೆ ನೀರು ಕುಡಿಸುವ ಮೂಲಕ ಗಂಟಲಲ್ಲಿದ್ದ ಕಪ್ಪೆ ಸಹಿತ ಪ್ಲಾಸ್ಟಿಕ್’ನ್ನು ಹೊರತೆಗೆದು ಹಾವನ್ನು ರಕ್ಷಿಸಿದ್ದು, ಬಳಿಕ ನಾಗರಹಾವನ್ನು ಸಮೀಪದ ಯಡವನಾಡು ಅರಣ್ಯಕ್ಕೆ ಬಿಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!