ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಕಾಂಗ್ರೆಸ್ ಪರವಾಗಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಇಂದು ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ.
ಡಿಕೆಶಿ ಭೇಟಿ ಬೆನ್ನಲ್ಲೇ ತೆಲಂಗಾಣದಲ್ಲಿ ಪೋಸ್ಟರ್ ವಾರ್ ಶುರುವಾಗಿದ್ದು, ಕಾಂಗ್ರೆಸ್ಗೆ ಮತ ಹಾಕಿದರೆ ಕರ್ನಾಟಕದಲ್ಲಿ ಆದ ಗತಿಯೇ ಇಲ್ಲಿಯೂ ಆಗುತ್ತದೆ ಎಂಬ ಪೋಸ್ಟರ್ಗಳು ಹರಿದಾಡುತ್ತಿವೆ. ಕರ್ನಾಟಕದಲ್ಲಿ ಉದ್ಯೋಗದ ಬದಲಿಗೆ ನೇಣಿನ ಕುಣಿಕೆ ಕಾಣುತ್ತಿದ್ದು, ಕಾಂಗ್ರೆಸ್ಗೆ ಮತ ಹಾಕಿದ ಪಾಪಕ್ಕೆ ನಿರುದ್ಯೋಗಿಗಳು ನರಳುತ್ತಿದ್ದಾರೆ ಎಂದು ಪೋಸ್ಟರ್ಗಳಲ್ಲಿ ಮುದ್ರಿಸಲಾಗಿದೆ.
ಅಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೋಧನ್ಗೆ ಭೇಟಿ ನೀಡಲಿದ್ದು, ರಾಹುಲ್ ಗಾಂಧಿ, ರೇವಂತ್ ರೆಡ್ಡಿ ಚಿತ್ರವಿರುವ ಪೋಸ್ಟರ್ಗಳು ಸಂಚಲನ ಮೂಡಿಸುತ್ತಿವೆ. ನಮ್ಮ ಮಕ್ಕಳ ಸಾವಿಗೆ ಕಾಂಗ್ರೆಸ್ ಕಾರಣ, ಕೂಡಲೇ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ಪೋಸ್ಟರ್ಗಳು ನಗರಾದ್ಯದಂತ ರಾರಾಜಿಸುತ್ತಿವೆ.