Friday, September 19, 2025

ಹುಟ್ಟುಹಬ್ಬಕ್ಕೆ ಬ್ರಿಟನ್​ ರಾಜಕುಮಾರ ಕಿಂಗ್ ಚಾರ್ಲ್ಸ್ ಉಡುಗೊರೆಯಾಗಿ ಕೊಟ್ಟ ಕದಂಬ ಸಸಿಯನ್ನು ನೆಟ್ಟ ಪ್ರಧಾನಿ ಮೋದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಅವರ ಜನ್ಮದಿನಾಚರಣೆ ನಿಮಿತ್ತ ಬ್ರಿಟನ್​ ರಾಜಕುಮಾರ​ 3ನೇ ಚಾರ್ಲ್ಸ್ ಅವರು ಉಡುಗೊರೆಯಾಗಿ ಕಳುಹಿಸಿದ​​ ಕದಂಬ್​ ಸಸಿಯನ್ನು ದೆಹಲಿಯಲ್ಲಿನ 7, ಲೋಕ್​ ಕಲ್ಯಾಣ್​ ಮಾರ್ಗ್​​ ನಿವಾಸದಲ್ಲಿ ಇಂದು ಪ್ರಧಾನಿ ನೆಟ್ಟಿದ್ದಾರೆ ಎಂದು ಪ್ರಧಾನಿಗಳ ಗೃಹ ಕಚೇರಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ‘ಎಕ್​ ಪೇಡ್​ ಮಾ ಕೆ ನಾಮ್’​ (ಅಮ್ಮನ ಹೆಸರಲ್ಲಿ ಒಂದು ಮರ) ಎಂಬ ಕಾರ್ಯಕ್ರಮದಿಂದ ಸ್ಪೂರ್ತಿ ಪಡೆದಿದ್ದು, ಅವರ ಹುಟ್ಟುಹಬ್ಬದ ನಿಮಿತ್ತ ಈ ಸಸಿಯನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಭಾರತದಲ್ಲಿನ ಬ್ರಿಟಿಷ್​ ಹೈ ಕಮಿಷನ್ ಕಚೇರಿ ತಿಳಿಸಿ, ಸಾಮಾಜಿಕ ಜಾಲತಾಣದಲ್ಲಿ ಗಿಡದ ಚಿತ್ರ ಹಂಚಿಕೊಂಡಿತ್ತು. ಹಾಗೇ ಈ ಉಡುಗೊರೆಯು ಪರಿಸರ ಉಳಿಸುವಿಕೆಗೆ ಪ್ರಧಾನಿ ಮೋದಿ ಮತ್ತು 3ನೇ ಚಾರ್ಲ್ಸ್​​ ಅವರ ಬದ್ಧತೆಯನ್ನು ಪ್ರತಿಬಿಂಬಿಸಲಿದೆ ಎಂದು ತಿಳಿಸಿತ್ತು.

https://x.com/BJP4India/status/1968955860236767565?ref_src=twsrc%5Etfw%7Ctwcamp%5Etweetembed%7Ctwterm%5E1968955860236767565%7Ctwgr%5E3d31eef94d31f5d3b9bb2ada28d9e7978162277d%7Ctwcon%5Es1_&ref_url=https%3A%2F%2Fwww.moneycontrol.com%2Fnews%2Findia%2Fpm-modi-plants-kadamb-sapling-gifted-by-king-charles-at-his-official-residence-watch-13561552.html

ಈ ಸಸಿಯನ್ನು ಪ್ರಧಾನಿಗಳ ಅಧಿಕೃತ ನಿವಾಸದ ಮನೆಯಂಗಳದಲ್ಲಿ ಇಂದು ಮೋದಿ ನೆಟ್ಟಿದ್ದು, ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಸ್ನೇಹ ಮತ್ತು ಪರಿಸರ ಸುಸ್ಥಿರತೆಯ ಬದ್ಧತೆಯ ಹಂಚಿಕೆಯನ್ನು ಸಂಕೇತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಏನಿದು ‘ಎಕ್​ ಪೇಡ್​ ಮಾ ಕೆ ನಾಮ್’ ಯೋಜನೆ
ಜೂನ್​ನಲ್ಲಿ ಗುಜರಾತ್​ನ ಕಚ್​​ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿಗೆ 1971ರ ಯುದ್ದದಲ್ಲಿ ಧೈರ್ಯ ತೋರಿದ್ದ ಮಹಿಳೆಯರ ಗುಂಪೊಂದು ಸಸಿಯನ್ನು ಉಡುಗೊರೆಯಾಗಿ ನೀಡಿತ್ತು. ಈ ಸಸಿಯನ್ನು ತಮ್ಮ​​ ನಿವಾಸದಲ್ಲಿ ನೆಡುವುದಾಗಿ ಪ್ರಧಾನಿ ಮೋಡಿ ಅವರು ಭರವಸೆ ನೀಡಿದ್ದರು. ಅದರಂತೆ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಿಂಧೂರ ಸಸಿ ಎಂದು ನಾಮಕರಣ ಮಾಡಿ ಈ ಗಿಡವನ್ನು ಆಪರೇಷನ್​ ಸಿಂಧೂರ ಕಾರ್ಯಾಚರಣೆಯ ಗೌರವಾರ್ಥವಾಗಿ ನೆಟ್ಟಿದ್ದರು. ಹಾಗೇ ಈ ಸಮಯದಲ್ಲಿ ಎಲ್ಲರಿಗೂ ಗಿಡ ನೆಡುವಂತೆ ಪ್ರಧಾನಿಗಳು ಮನವಿ ಮಾಡಿದ್ದರು.

ಜೀವನ ನಿರ್ವಹಣೆಯಲ್ಲಿ ಪೋಷಿಸುವ ತಾಯಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಸಸಿಯನ್ನು ನಡೆಲಾಗಿದೆ. ಮರಗಳು ಜೀವನದ ಅಡಿಪಾಯ ಮತ್ತು ತಾಯಿಯಂತೆ ಅವು ಮುಂದಿನ ಪೀಳಿಗೆಗೆ ಪೋಷಣೆ, ರಕ್ಷಣೆ ಮತ್ತು ಭವಿಷ್ಯವನ್ನು ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ ತಾಯಂದಿರ ಗೌರವಾರ್ಥವಾಗಿ ಮರವನ್ನು ನೆಡಲು ಪ್ರತಿಯೊಬ್ಬರು ಮುಂದಾಗಬೇಕು. ಇದು ಸ್ಮಾರಕದ ಜೊತೆಗೆ ಪರಿಸರ ಸಂರಕ್ಷಣೆಯ ತುರ್ತು ಅಗತ್ಯವನ್ನು ಸಹ ತಿಳಿಸುತ್ತದೆ ಎಂದು ತಿಳಿಸಲಾಗಿತ್ತು

ಇದನ್ನೂ ಓದಿ