ಹೊಸದಿಗಂತ ವರದಿ ಕಲಬುಗಿ:
ಬೀದರ್/ಕಲಬುರಗಿ:ಕಲಬುರಗಿ ಕೇಂದ್ರ ಕಾರಾಗೃಹದಿಂದ ಜುಲೈ 14ರಂದು ಪರಾರಿಯಾಗಿದ್ದ ಕೈದಿ ಸಾಗರ್ ಹೊಸಮನಿಯನ್ನು ಬೀದರ್ ಜಿಲ್ಲೆಯ ಭಾಲ್ಕಿ ನಗರ ಬಸ್ ನಿಲ್ದಾಣದ ಸಮೀಪ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಪರಾರಿಯಾಗಿದ್ದ ಸಾಗರ್ ಭಾಲ್ಕಿ ಕಡೆಗೆ ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಿಗಾ ವಹಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧನ ಕಾರ್ಯಾಚರಣೆಯಲ್ಲಿ ಭಾಲ್ಕಿ ನಗರ ಠಾಣೆ, ಧನ್ನೂರು ಠಾಣೆ ಹಾಗೂ ಡಿಎಆರ್ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಜುಲೈ 14ರ ನಸುಕಿನ ಜಾವ ಸಾಗರ್, ಸಂತೋಷ್ ಹಾಗೂ ಮಸ್ತಾನ್ ಎಂಬ ಮೂವರು ಕೈದಿಗಳು ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದರು. ಈಗಾಗಲೇ ಸಂತೋಷ್ ಬಂಧನಕ್ಕೊಳಗಾಗಿದ್ದು, ಇದೀಗ ಸಾಗರ್ ಕೂಡ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ.
ಇದನ್ನೂ ಓದಿ:
ಇದರಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಇಬ್ಬರು ಮತ್ತೆ ಪೊಲೀಸರ ವಶಕ್ಕೆ ಬಂದಂತಾಗಿದೆ. ಉಳಿದಿರುವ ಮಸ್ತಾನ್ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿವೆ.



