ಎಣ್ಣೆ ಏಟಲ್ಲಿ ಗೆಳೆಯರ ಮಧ್ಯೆ ಕಿರಿಕ್.. ಅತಿರೇಕದ ಜಗಳ ಕೊಲೆಯಲ್ಲಿ ಅಂತ್ಯ

ಹೊಸದಿಗಂತ ವಿಜಯಪುರ:

ಕುಡಿದ ನಶೆಯಲ್ಲಿ ಗೆಳೆಯರ ಮಧ್ಯೆ ಜಗಳ ಉಂಟಾಗಿ, ಗೆಳೆಯನೊಬ್ಬನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಮಹಾನಗರ ಪಾಲಿಕೆಯ ಬಳಿಯಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ.

ನಗರದ ಸಮೀರ್ ಬಡಿಗೇರ್ (40) ಹತ್ಯೆಯಾಗಿರುವ ಯುವಕ.

ಕುಡಿದ ನಶೆಯಲ್ಲಿ ಗೆಳೆಯ ವಿನಯ ಹಾಗೂ ಸಮೀರ್ ಮಧ್ಯೆ ಜಗಳ ನಡೆದಿದ್ದು, ವಿನಯ ಚಾಕುವಿನಿಂದ ಸಮೀರನ ದೇಹಕ್ಕೆ ಏಳಕ್ಕಿಂತ ಹೆಚ್ಚು ಬಾರಿ ಇರಿದು ಹತ್ತೆ ಮಾಡಿದ್ದಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!