ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿ, ಸಂಸತ್ತಿನಲ್ಲಿ ಈ ಕುರಿತು ಒಂದು ದಿನದ ಪ್ರತ್ಯೇಕ ಚರ್ಚೆಗೆ ಒತ್ತಾಯಿಸಿದರು.
“ಸಂಸತ್ತಿನಿಂದ ದೇಶಕ್ಕೆ ಸಂದೇಶವನ್ನು ಪ್ರಸಾರ ಮಾಡಲಾಗಿದೆ. ಸಂಸತ್ತಿಗೆ ನೀಟ್ ವಿಷಯವು ಮುಖ್ಯವಾಗಿದೆ ಎಂದು ನಾವು ವಿದ್ಯಾರ್ಥಿಗಳಿಗೆ ಸಂದೇಶವನ್ನು ಕಳುಹಿಸಲು ಬಯಸುತ್ತೇವೆ. ಆದ್ದರಿಂದ, ಈ ಸಂದೇಶವನ್ನು ಕಳುಹಿಸಲು, ಸಂಸತ್ತು ಇದನ್ನು ಚರ್ಚಿಸಬೇಕೆಂದು ನಾವು ಬಯಸುತ್ತೇವೆ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ನೀಟ್ ವಿಚಾರದ ಚರ್ಚೆಗೆ ಹೆಚ್ಚುವರಿ ದಿನ ನೀಡುವಂತೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ನೀವು ನಿಮ್ಮ ಸಲಹೆಗಳನ್ನು ನೀಡಬಹುದು, ಆದರೆ ನಾನು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.
“ಸಂಸತ್ತಿನ ಕಲಾಪಗಳನ್ನು ಕೆಲವು ನಿಯಮಗಳು ಮತ್ತು ಸಂಪ್ರದಾಯಗಳ ಆಧಾರದ ಮೇಲೆ ನಡೆಸಲಾಗುತ್ತದೆ. ಯಾವುದೇ ಚರ್ಚೆಯನ್ನು ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ನಂತರವೇ ಮಾಡಬೇಕು ಎಂದು ನಾನು ಪ್ರತಿಪಕ್ಷಗಳಿಗೆ ವಿನಂತಿಸುತ್ತೇನೆ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಆದರೆ, ನೀಟ್ ಕುರಿತು ಒಂದು ದಿನದ ಚರ್ಚೆಗೆ ರಾಹುಲ್ ಗಾಂಧಿ ಅವರ ಸಲಹೆಯನ್ನು ಸ್ಪೀಕರ್ ನಿರಾಕರಿಸಿದ್ದರಿಂದ ಪ್ರತಿಪಕ್ಷಗಳ ಸಂಸದರು ಲೋಕಸಭೆಯಿಂದ ಹೊರನಡೆದರು ಎಂದು ವರದಿಯಾಗಿದೆ.