ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳ್ಳಂ ಬೆಳಗ್ಗೆ ಕೃಷಿ ಜಮೀನಿನಲ್ಲಿ ಕಾಣಿಸಿಕೊಂಡರು. ಮೊನ್ನೆ ಗ್ಯಾರೇಜ್ನಲ್ಲಿ ಬೈಕ್ ರಿಪೇರಿ ಮಾಡಿದ್ದ ಅವರು, ಇವತ್ತು ಭತ್ತದ ಪೈರು ಹಿಡಿದು ಕಾಣಿಸಿಕೊಂಡರು. ಭಾರತ್ ಜೋಡೋ ಯಾತ್ರಾ ಶೈಲಿಯ ಟೀ ಶರ್ಟ್, ಸಣ್ಣ ನಿಕ್ಕರ್ ಧರಿಸಿದ ರಾಹುಲ್ ಭತ್ತದ ಗದ್ದೆಗಿಳಿದರು.
ರೈತರೊಂದಿಗೆ ಮಾತನಾಡಿ ಕೃಷಿಯಲ್ಲಿ ಆಗಿರುವ ಏರಿಳಿತಗಳ ಬಗ್ಗೆ ವಿಚಾರಿಸಿದರು. ಬಳಿಕ ಟ್ರ್ಯಾಕ್ಟರ್ ಮೂಲಕ ಹೊಲ ಉಳುಮೆ ಮಾಡಲಾಯಿತು. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾಕ್ಕೆ ತೆರಳಿದ ರಾಹುಲ್ ಗಾಂಧಿ.. ಹರಿಯಾಣದ ಸೋನಿಪತ್ ಪ್ರದೇಶದಲ್ಲಿ ರೈತರೊಂದಿಗೆ ಸಂವಾದ ನಡೆಸಿದರು.
ಬರೋಡಾ ಮತ್ತು ಮದೀನಾ ಗ್ರಾಮಗಳ ಕೃಷಿ ಕ್ಷೇತ್ರಗಳಿಗೆ ರಾಹುಲ್ ಭೇಟಿ ನೀಡಿ, ಅಲ್ಲಿನ ರೈತರೊಂದಿಗೆ ಸಂವಾದ ನಡೆಸುತ್ತಿರುವ, ಹೊಲ ಉಳುಮೆ ಮಾಡಿ ನಾಟಿ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯು ಈ ಫೋಟೋಗಳನ್ನು ಹಂಚಿಕೊಂಡಿದೆ ಮತ್ತು “ಹರ್ಯಾಣದ ರೈತರ ನಡುವೆ ರಾಹುಲ್ ಗಾಂಧಿ” ಎಂದು ಟ್ವೀಟ್ ಮಾಡಿದೆ.