ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ್ನ ಹರಿದ್ವಾರದ ರೋಷನ್ಬಾದ್ ಜೈಲಿನಿಂದ ನವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ರಾಮಲೀಲಾ ನಾಟಕ ನಡೆಯುತ್ತಿರುವ ವೇಳೆ ಪಂಕಜ್ ಮತ್ತು ರಾಜ್ಕುಮಾರ್ ಎಂಬ ಕೈದಿಗಳು ಎಸ್ಕೇಪ್ ಆಗಿದ್ದಾರೆ.
ಹತ್ಯೆ ಮತ್ತು ಅಪಹರಣ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಇಬ್ಬರೂ ಕೈದಿಗಳು ರಾಮಲೀಲಾ ನಾಟಕದಲ್ಲಿ ವಾನರ ಪಾತ್ರ ಮಾಡಿದ್ದರು. ಎಲ್ಲರೂ ನಾಟಕ ನೋಡುತ್ತಾ ಮಗ್ನರಾಗಿದ್ದ ವೇಳೆ ವಾನರ ವೇಷಿಗಳು, ಅಸಲಿ ವಾನರಂತೆಯೇ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದಾರೆ.
ಈ ಒಂದು ಘಟನೆ ಶುಕ್ರವಾರ ರಾತ್ರಿ ನಡೆದಿದೆ. ನಾಟಕದಲ್ಲಿ ಸೀತಾಮಾತೆ ರಾಮನನ್ನು ಸಂಧಿಸುವ ಸನ್ನಿವೇಶ ಬಂದರೂ ಕೂಡ ಈ ಇಬ್ಬರು ವಾನರ ವೇಷ ಹಾಕಿದವರು ಅಲ್ಲಿ ಕಾಣಿಸಿಲ್ಲ. ವಿಚಾರ ತಿಳಿದ ಜೈಲು ಸಿಬ್ಬಂದಿ ಹುಡುಕಾಟ ನಡೆಸಿದಾಗ. ಜೈಲಿನ ಗೋಡೆಯನ್ನು ಏಣಿಯಿಂದ ಹತ್ತಿ ಅಲ್ಲಿಂದ ಆಚೆ ಜಿಗಿದು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿರುವ ಹರಿದ್ವಾರದ ಎಸ್ಎಸ್ಪಿ ಪ್ರಮೇಂದ್ರ ಶುಕ್ರವಾರ ರಾತ್ರಿ ಜೈಲಿನೊಳಗಡೆ ನಡೆದ ರಾಮಲೀಲಾ ನಾಟದ ವೇಳೆ ಇಬ್ಬರು ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಅವರ ಪತ್ತೆಗೆ ಈಗಾಗಲೇ ತಂಡವನ್ನು ರಚನೆ ಮಾಡಲಾಗಿದೆ. ಸದ್ಯದರಲ್ಲಿಯೇ ಇಬ್ಬರೂ ಕೈದಿಗಳನ್ನು ಸೆರೆಹಿಡಿಯಲಾಗುವುದು ಎಂದು ಹೇಳಿದ್ದಾರೆ.