ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹೊರವಲಯದಲ್ಲಿ ಬೆಚ್ಚಿ ಬೀಳಿಸುವಂಥ ದುಷ್ಕೃತ್ಯವೊಂದು ಬೆಳಕಿಗೆ ಬಂದಿದೆ. ಬಿಹಾರದಿಂದ 17 ವರ್ಷದ ಬಾಲಕಿಯನ್ನು ಕರೆತಂದು ಅತ್ಯಾಚಾರ ಎಸಗಿ, ಬಳಿಕ ಹತ್ಯೆ ಮಾಡಿ ಶವವನ್ನು ಸೂಟ್ಕೇಸ್ನಲ್ಲಿ ಹಾಕಿ ರೈಲ್ವೆ ಬ್ರಿಡ್ಜ್ ಬಳಿ ಬಿಸಾಡಿದ ಘಟನೆ ವರದಿಯಾಗಿದೆ.
ಆರೋಪಿಯು ಬಾಲಕಿ ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲ ಎಂಬ ಕಾರಣಕ್ಕೆ ಬಿಯರ್ ಬಾಟಲಿಯಿಂದ ಆಕೆಯ ಖಾಸಗಿ ಅಂಗಕ್ಕೆ ಹೊಡೆದು, ನಂತರ ರಾಡ್ ಹಾಗೂ ಕೈಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಹತ್ಯೆ ಬಳಿಕ ಸಹ ಅಪರಾಧಿಗಳ ಸಹಕಾರದಿಂದ ಶವವನ್ನು ಕ್ಯಾಬ್ ಮೂಲಕ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿಗೆ ತೆಗೆದುಕೊಂಡು ಹೋಗಿ ಅಲ್ಲೆ ಬಿಸಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಹಾರ ಮೂಲದ ಅಶಿಕ್ ಕುಮಾರ್(22), ಮುಖೇಶ್ ರಾಜಬನ್ಶಿ(35) ಇಂದುದೇವಿ(32), ರಾಜರಾಮ್ ಕುಮಾರ್(18), ಪಿಂಟು ಕುಮಾರ್(18), ಕಾಲು ಕುಮಾರ್(17), ರಾಜು ಕುಮಾರ್(17) ಎಂದು ಗುರುತಿಸಲಾಗಿದೆ.
ಸಿಸಿಟಿವಿ ದೃಶ್ಯ ಆಧರಿಸಿ ಸೂರ್ಯನಗರ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಬಿಹಾರದಲ್ಲಿ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಕಿಡ್ನಾಪ್ ಕೇಸ್ ಕೂಡ ದಾಖಲಾಗಿದೆ. ಆರೋಪಿಗಳ ಮೊಬೈಲ್ ಸಂಭಾಷಣೆ, ಪ್ರಯಾಣದ ಸಿಸಿಟಿವಿ ದೃಶ್ಯಗಳು ಹಾಗೂ ಶವ ಸಾಗಾಟದ ದೃಶ್ಯಾಧಾರಗಳನ್ನು ಆಧರಿಸಿ ಪ್ರಕರಣದ ತನಿಖೆ ಮುಂದುವರೆದಿದೆ.