ನಮ್ಮ ಸಂಪ್ರದಾಯದಲ್ಲಿ ಹಣೆಗೆ ಕುಂಕುಮ ಇಡೋದು ಮಹತ್ವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಕೇತಗಳಾಗಿವೆ. ಸಾಮಾನ್ಯವಾಗಿ ಮದುವೆಯಾದ ಮಹಿಳೆಯರು ಹಣೆಯ ಮಧ್ಯದಲ್ಲಿ ಕುಂಕುಮವನ್ನು ಹಚ್ಚುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಿಂದು ಸಂಪ್ರದಾಯದಲ್ಲಿ ಇದನ್ನು ವೈವಾಹಿಕ ಸ್ಥಿತಿ ಸೂಚಕವಾಗಿ ನೋಡಲಾಗುತ್ತದೆ. ಜೊತೆಗೆ ಪುರುಷರು ಕುಂಕುಮವನ್ನು ತಿಲಕ ರೂಪದಲ್ಲಿ ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಇದು ವೈಭವ, ಧಾರ್ಮಿಕತೆ ಮತ್ತು ಸುಖ-ಶಾಂತಿಯ ಸಂಕೇತವಾಗಿದೆ.

- ರಕ್ತ ಸಂಚಾರ ಸುಧಾರಣೆ: ಹಣೆಯ ಮಧ್ಯದಲ್ಲಿ ಕುಂಕುಮ ಹಚ್ಚುವ ಮೂಲಕ ಅದು ತ್ವರಿತವಾಗಿ ರಕ್ತ ಸಂಚಾರವನ್ನು ಉತ್ತೇಜಿಸುತ್ತದೆ. ಈ ಭಾಗದಲ್ಲಿ ಹಲವು ಸಣ್ಣ ರಕ್ತನಾಳಗಳು ಮತ್ತು ನರಗಳು ಇರುವುದು, ಹೀಗಾಗಿ ಸೂಕ್ಷ್ಮ ಉಷ್ಣ ಉತ್ಪಾದನೆ ಸಾಧ್ಯವಾಗುತ್ತದೆ. ಇದರಿಂದ ಶರೀರದ ತಾಪಮಾನ ಸಮತೋಲನದಲ್ಲಿರುತ್ತದೆ ಮತ್ತು ತಲೆನೋವು ಕಡಿಮೆಯಾಗುತ್ತದೆ.
- ನಾಳವ್ಯವಸ್ಥೆ ಮೇಲೆ ಪರಿಣಾಮ: ಹಣೆಯ ಮಧ್ಯದಲ್ಲಿ “ಅಜ್ಞಾ ಚಕ್ರ” ಅಥವಾ ತೃತೀಯ ಕಣ್ಣು ಎಂದು ಕರೆಯುವ ಸೂಕ್ಷ್ಮ ನರ ಕೇಂದ್ರವಿದೆ. ಕುಂಕುಮ ಹಚ್ಚುವಾಗ ಆಗುವ ಲಘು ಒತ್ತಡ ಈ ಕೇಂದ್ರವನ್ನು ಸಕ್ರಿಯಗೊಳಿಸುತ್ತದೆ. ವೈಜ್ಞಾನಿಕವಾಗಿ ಇದು ಶಾಂತಿ, ಚಿಂತನ ಶಕ್ತಿ, ಧೈರ್ಯ ಮತ್ತು ಮನೋಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
- ತಾಪಮಾನ ಮತ್ತು ರಕ್ತದೊತ್ತಡ ನಿಯಂತ್ರಣ:ಕುಂಕುಮದಲ್ಲಿ ಇರುವ ಕೆಲವು ರಾಸಾಯನಿಕ ಗುಣಗಳು ತ್ವಚೆಯ ಮೂಲಕ ದೇಹ ಸೇರುತ್ತದೆ. ಇದು ಉಷ್ಣವನ್ನು ಉಂಟುಮಾಡಿ ತಲೆಬಾಧೆ, ಒತ್ತಡ, ನಿದ್ದೆ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಚರ್ಮದ ಸುರಕ್ಷತೆ: ಹಣೆಯ ಭಾಗದಲ್ಲಿ ಬೀಳುವ ಲಘು ಒತ್ತಡದಿಂದ ಸೌಮ್ಯ ಉಷ್ಣವು ಸೃಷ್ಟಿಯಾಗುತ್ತದೆ, ಇದು ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ.