ಹೊಸದಿಗಂತ ವರದಿ,ಗೋಕರ್ಣ:
ಸಮುದ್ರದ ಸುಳಿಗೆ ಸಿಲುಕಿದ ಜೀವಾಪಾಯದಲ್ಲಿದ್ದ ನಾಲ್ಕು ಜನ ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಮಿಡ್ಲ ಬೀಚ್ನ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ.
ಕೇರಳ ಮೂಲದ ಅದೈತ್, ಮುರುಳಿ, ತೇಜಸ್ವಿ, ಪ್ರೀಯಾಮ್ವಾ ಎನ್ನುವರು ಜೀವಾಪಾಯದಿಂದ ಪಾರಾಗಿದ್ದಾರೆ. ನಾಲ್ವರು ಸಮುದ್ರದಲ್ಲಿ ಈಜಾಡಲು ತೆರಳಿದ ಈ ವೇಳೆ ಸುಳಿಗೆ ಸಿಲುಕಿ ಪರದಾಡುತ್ತಿದ್ದರು.