August 18, 2026
Tuesday, August 18, 2026
spot_img

ಕಾರವಾರದಲ್ಲಿ ಹೊತ್ತಿ ಉರಿದ ರೆಸ್ಟೋರೆಂಟ್‌: ಲಕ್ಷಾಂತರ ರೂಪಾಯಿ ಹಾನಿ

ಹೊಸದಿಗಂತ ವರದಿ ಕಾರವಾರ:

ನಗರದ ಗ್ರೀನ್ ಸ್ಟ್ರೀಟ್ ರಸ್ತೆಯ ಅಂಬೇಡ್ಕರ್ ವೃತ್ತದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಲಕ್ಷಾಂತರ ರೂಪಾಯಿಗಳ ಹಾನಿ ಆಗಿರುವುದಾಗಿ ಅಂದಾಜಿಸಲಾಗಿದೆ.
ಟಾಜ್ ಫುಡ್ ಕಾರ್ನರ್ ಅಡುಗೆ ಕೋಣೆಯಲ್ಲಿ ಎಲ್.ಪಿ.ಜಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿ ಉರಿದಿದೆ ಎನ್ನಲಾಗುತ್ತಿದ್ದು ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ.

ಘಟನೆಯ ಕುರಿತಂತೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಆಗ್ನಿಶಾಮಕ ಸಿಬ್ಬಂದಿಗಳು ಕಾರ್ಯಪೃವೃತ್ತರಾಗಿ ಬೆಂಕಿ ಅಕ್ಕ ಪಕ್ಕಗಳಲ್ಲಿ ವ್ಯಾಪಿಸದಂತೆ ಬೆಂಕಿ ಆರಿಸುವ ಅಗತ್ಯ ಕ್ರಮಗಳನ್ನು ಕೈಗೊಂಡರಲ್ಲದೇ ಸಂಭವನೀಯ ಅನಾಹುತವನ್ನು ತಡೆಯಲು ಯಶಸ್ವಿಯಾದರು.

ಕಾರವಾರ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿದರು.
ಬೆಂಕಿ ಅವಘಡದಿಂದ ಹೊಟೇಲ್ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಜೀವಹಾನಿಯಾಗಿಲ್ಲ. ಅಗ್ನಿ ಅನಾಹುತ ಗ್ಯಾಸ್ ಸೋರಿಕೆಯಿಂದ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ತನಿಖೆ
ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !